ಅಗತ್ಯ ವಸ್ತುಗಳ ಬೆಲೆಗಳು ಹಿಂದೆಂದೂ ಇಲ್ಲದಷ್ಟು ಏರಿಕೆಯಾಗಿರುವ ಬಗ್ಗೆ ಚರ್ಚೆಯನ್ನು ಆರಂಭಿಸಿದ ಶ್ರೀ ಪ್ರಸನ್ನ ಬಾಯಿ ಮೆಹ್ತಾ (ಸಂಸ್ಥಾ ಕಾಂಗ್ರೆಸ್) ಅವರು ‘ಗಗನಕ್ಕೇರುತ್ತಿರುವ ಬೆಲೆಗಳು ಶ್ರೀಸಾಮಾನ್ಯ ನಿಗೆ ತೀರಾ ಧಕ್ಕೆಯುಂಟು ಮಾಡಿವೆ’ ಎಂದರು. ಈಗಿನ ಪರಿಸ್ಥಿತಿಗೆ ಸರ್ಕಾರದ ತಪ್ಪು ಆರ್ಥಿಕ ನೀತಿಗಳೇ ಕಾರಣವೆಂದೂ ಅವರು ಹೇಳಿದರು.