ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಬುಧವಾರ 9.8.1972

Last Updated 8 ಆಗಸ್ಟ್ 2022, 23:30 IST
ಅಕ್ಷರ ಗಾತ್ರ

ಬೆಲೆ ಏರಿಕೆ: ಸರ್ಕಾರದ ಕ್ರಮಗಳ
ಬಗ್ಗೆ ವಿರೋಧ ಪಕ್ಷಗಳ ಅತೃಪ್ತಿ

ನವದೆಹಲಿ, ಆ. 8– ಆಹಾರ ಧಾನ್ಯಗಳ ಬೆಲೆ ಪರಿಸ್ಥಿತಿ ವಿಷಯದಲ್ಲಿ ಸರ್ಕಾರ ವ್ಯವಹರಿಸು ತ್ತಿರುವ ರೀತಿ ಬಗ್ಗೆ ವಿರೋಧ ಪಕ್ಷದ
ಸದಸ್ಯರೆಲ್ಲರೂ ಹೆಚ್ಚು ಕಡಿಮೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಬಳಕೆದಾರರಿಗೆ ಪರಿಹಾರ ಒದಗಿಸಲು ಅಗತ್ಯ ವಸ್ತುಗಳ ಪಡಿತರ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಸಿಪಿಐ ಮತ್ತು ಸೋಷಲಿಸ್ಟ್ ಪಕ್ಷದವರೂ ಸೇರಿ ಕೆಲವು ಮಂದಿ ಸದಸ್ಯರು ಸಲಹೆ ಮಾಡಿದ್ದಾರೆ.

ಇಂದಿರಾ ದೈವ ನಂಬಿಕೆ

ಮುಂಬೈ, ಆ. 8– ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ದೇವರಲ್ಲಿ ನಂಬಿಕೆ ಇದೆ. ಆದರೆ, ಜ್ಯೋತಿಷದಲ್ಲಿ ಇಲ್ಲ.

‘ಇಲಸ್ಟ್ರೇಟೆಡ್ ವೀಕ್ಲಿ’ ಪತ್ರಿಕೆಯ ಸ್ವಾತಂತ್ರ್ಯೋತ್ಸವ ವಿಶೇಷಾಂಕಕ್ಕೆ ಖುಷವಂತ್ ಸಿಂಗ್ ಅವರಿಗೆ ನೀಡಿದ ಸಂದರ್ಶನ
ದಲ್ಲಿ ಪ್ರಧಾನಿಯವರು ‘ನನಗೆ ದೇವರಲ್ಲಿ ನಂಬಿಕೆ ಇದೆಯಾದರೂ, ಗಡ್ಡ ಧರಿಸಿ ಕುಳಿತ ಮನುಷ್ಯನ ರೂಪದಲ್ಲಿಲ್ಲ...’ ಎಂದರು.

‘ಜ್ಯೋತಿಷದಲ್ಲಿ ನಿಮಗೆ ಇದೆಯೇ?’ ಎಂಬ ಪ್ರಶ್ನೆಗೆ, ‘ಇಲ್ಲ. ಎಳ್ಳಷ್ಟೂ ಇಲ್ಲ. ಜ್ಯೋತಿಷವನ್ನು ನಂಬಿ ಅದರ ಆಧಾರದ ಮೇಲೆ ಯಾರೂ ತಮ್ಮ ಕೆಲಸ ಕಾರ್ಯನಿರ್ವಹಿಸಬಾರದು. ಆದರೆ, ಜನತೆ ಜ್ಯೋತಿಷದಲ್ಲಿ ಆಸಕ್ತಿ ಹೊಂದಿ ಅದರ ಬೆನ್ನು ಹತ್ತಿದರೆ ನನ್ನದೇನೂ ಅಭ್ಯಂತರವಿಲ್ಲ’ ಎಂದು ಪ್ರಧಾನಿ ಖಚಿತವಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT