ಬೆಂಗಳೂರು, ಜ. 5– ಮುಂಬರುವ ರಾಜ್ಯ ವಿಧಾನಸಭೆಯ ಚುನಾವಣೆಗಳು ಯಾವುದೇ ಬಿಕ್ಕಟ್ಟು ಅಥವಾ ಆಕ್ಷೇಪಣೆಗಳಿಗೆ ಅವಕಾಶ ನೀಡದ ನ್ಯಾಯವಾಗಿ ನಡೆಯುವಂತೆ ನೋಡಿಕೊಳ್ಳವುದು ಸರ್ಕಾರಿ ನೌಕರರ ಹೊಣೆ ಎಂದು ರಾಜ್ಯಪಾಲ ಧರ್ಮವೀರ ಅವರು ಇಂದು ಇಲ್ಲಿ ಹೇಳಿ ಎಲ್ಲರ ವರ್ಗದ ನೌಕರರು ಪಕ್ಷಾತೀತವಾಗಿ ವರ್ತಿಸಬೇಕೆಂದು ಕರೆ ನೀಡಿದರು.