<p><strong>ಬೆಂಗಳೂರು, ಅ. 29</strong>– ಸಾಹಿತ್ಯಕ್ಕೆ ಜಿ.ಎಸ್. ಆಮೂರ ಮತ್ತು ಜಿ.ಎಚ್. ನಾಯಕ್, ಸಂಗೀತಕ್ಕೆ ಕೃಷ್ಣ ಹಾನಗಲ್, ರಂಗಭೂಮಿಗೆ ಉಮಾಶ್ರೀ ಮತ್ತು ಕೃಷಿಗೆ ಎಸ್.ಸಿ. ಪಾಟೀಲ್ ಸೇರಿದಂತೆ ಸುಮಾರು 55 ಮಂದಿ ಗಣ್ಯರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗಳನ್ನು ನಾಳೆ ಪ್ರಕಟಿಸುವ ಸಂಭವವಿದೆ.</p><p>ಪ್ರಶಸ್ತಿಗಾಗಿ ಸುಮಾರು 4,000 ಅರ್ಜಿಗಳು ಬಂದಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಪರಿಶೀಲಿಸಿದ ಸಮಿತಿಯು 55ಕ್ಕೆ ಸೀಮಿತಗೊಳಿಸಿ, ಸಿದ್ಧಗೊಳಿಸಿದ್ದ ಪಟ್ಟಿಗೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಇಂದು ರಾತ್ರಿ ಒಪ್ಪಿಗೆ ನೀಡಿದ್ದು ನಾಳೆ, ಪಟ್ಟಿಯು ಪ್ರಕಟವಾಗಲಿದೆ.</p><p><strong>ಸೋನಿಯಾ ಗಾಂಧಿಗೆ ಜಿತೇಂದ್ರ ಪ್ರಸಾದ ಸವಾಲು</strong></p><p><strong>ನವದೆಹಲಿ, ಅ. 29–</strong> ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಜಿತೇಂದ್ರ ಪ್ರಸಾದ ಇಂದು ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಇಂದಿರಾಗಾಂಧಿ–ನೆಹರೂ ಕುಟುಂಬದ ಸದಸ್ಯೆಯನ್ನು ಎದುರಿಸುವ ಸವಾಲು ಸ್ವೀಕರಿಸಿದ್ದಾರೆ.</p>
<p><strong>ಬೆಂಗಳೂರು, ಅ. 29</strong>– ಸಾಹಿತ್ಯಕ್ಕೆ ಜಿ.ಎಸ್. ಆಮೂರ ಮತ್ತು ಜಿ.ಎಚ್. ನಾಯಕ್, ಸಂಗೀತಕ್ಕೆ ಕೃಷ್ಣ ಹಾನಗಲ್, ರಂಗಭೂಮಿಗೆ ಉಮಾಶ್ರೀ ಮತ್ತು ಕೃಷಿಗೆ ಎಸ್.ಸಿ. ಪಾಟೀಲ್ ಸೇರಿದಂತೆ ಸುಮಾರು 55 ಮಂದಿ ಗಣ್ಯರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗಳನ್ನು ನಾಳೆ ಪ್ರಕಟಿಸುವ ಸಂಭವವಿದೆ.</p><p>ಪ್ರಶಸ್ತಿಗಾಗಿ ಸುಮಾರು 4,000 ಅರ್ಜಿಗಳು ಬಂದಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಪರಿಶೀಲಿಸಿದ ಸಮಿತಿಯು 55ಕ್ಕೆ ಸೀಮಿತಗೊಳಿಸಿ, ಸಿದ್ಧಗೊಳಿಸಿದ್ದ ಪಟ್ಟಿಗೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಇಂದು ರಾತ್ರಿ ಒಪ್ಪಿಗೆ ನೀಡಿದ್ದು ನಾಳೆ, ಪಟ್ಟಿಯು ಪ್ರಕಟವಾಗಲಿದೆ.</p><p><strong>ಸೋನಿಯಾ ಗಾಂಧಿಗೆ ಜಿತೇಂದ್ರ ಪ್ರಸಾದ ಸವಾಲು</strong></p><p><strong>ನವದೆಹಲಿ, ಅ. 29–</strong> ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಜಿತೇಂದ್ರ ಪ್ರಸಾದ ಇಂದು ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಇಂದಿರಾಗಾಂಧಿ–ನೆಹರೂ ಕುಟುಂಬದ ಸದಸ್ಯೆಯನ್ನು ಎದುರಿಸುವ ಸವಾಲು ಸ್ವೀಕರಿಸಿದ್ದಾರೆ.</p>