<p><strong>ವೈಯಕ್ತಿಕ ಆದಾಯ ಅಂತರ ಇಳಿಸಲು ನಿರ್ದಿಷ್ಟ ಕ್ರಮಕ್ಕೆ ಕರೆ</strong></p>.<p><strong>ರಾಜೇಂದ್ರ ನಗರ, ಅ. 13– </strong>ವ್ಯಕ್ತಿಗಳ ಕನಿಷ್ಠ ಹಾಗೂ ಪರಮಾವಧಿ ಮಾಸಿಕ ವರಮಾನಗಳಲ್ಲಿರುವ ಭಾರಿ ಅಂತರವನ್ನು ವಾಸ್ತವಿಕ ಹಾಗೂ ಪೂರ್ವನಿಯೋಜಿತ ನಿರ್ದಿಷ್ಟ ಕ್ರಮಗಳಿಂದ ಕಡಿಮೆ ಮಾಡಬೇಕು ಎಂದು ಜಗಜೀವನರಾಂ ಇಂದು ಕರೆ ಇತ್ತರು.</p>.<p>ಕನಿಷ್ಠ, ಗರಿಷ್ಠ ಆದಾಯಗಳಿಗೆ ಇರಬೇಕಾದ ಪ್ರಮಾಣವೊಂದನ್ನು ವಾಸ್ತವಿಕ ಹಾಗೂ ವ್ಯಾವಹಾರಿಕ ರೀತಿಯಲ್ಲಿ ಮೊದಲು ನಿರ್ಧರಿಸಿ, ಜಾರಿಗೆ ತರಬೇಕು. ರಾಷ್ಟ್ರೀಯ ವರಮಾನ ಏರಿಕೆ ಅನುಸರಿಸಿ ಕನಿಷ್ಠ ವರಮಾನದಲ್ಲಿಯೂ ಉಂಟಾಗುವ ಏರಿಕೆಯನ್ನು ಗಣನೆಗೆ ತೆಗೆದುಕೊಂಡು, ಈ ಪ್ರಮಾಣವನ್ನು ಕಾಲಕಾಲಕ್ಕೆ ಪುನರ್ ವಿಮರ್ಶಿಸಬೇಕು ಎಂದು ರಾಂ ನುಡಿದರು.</p>.<p><strong>ಕಾವೇರಿ ಜಲ ವಿವಾದ ಚರ್ಚೆ ಸಫಲವಾಗದು?</strong></p>.<p><strong>ಬೆಂಗಳೂರು, ಅ. 13– </strong>1924ರ ಕಾವೇರಿ ನೀರು ಒಪ್ಪಂದದ ಬಗ್ಗೆ ಮೈಸೂರು, ಮದರಾಸ್ ರಾಜ್ಯಗಳ ನಡುವೆ ಮೂಲಭೂತ ಭಿನ್ನಾಭಿಪ್ರಾಯವಿರು<br />ವುದರಿಂದ ಈ ತಿಂಗಳು 27ರಂದು ನಡೆಯುವ ಅಂತಿಮ ಮಾತುಕತೆ ಫಲಪ್ರದವಾಗುವ ನಂಬಿಕೆಯಿಲ್ಲ.</p>.<p>ಕಾವೇರಿ ನೀರು ಹಂಚಿಕೆಯ ಬಗ್ಗೆ ನಿನ್ನೆ ದೆಹಲಿಯಲ್ಲಿ ಕೇಂದ್ರದ ನೀರಾವರಿ ಸಚಿವರ ಹಾಜರಿಯಲ್ಲಿ ಮೈಸೂರು, ಮದರಾಸ್ ಹಾಗೂ ಕೇರಳ ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ನಗರಕ್ಕೆ ಹಿಂದಿರುಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೈಯಕ್ತಿಕ ಆದಾಯ ಅಂತರ ಇಳಿಸಲು ನಿರ್ದಿಷ್ಟ ಕ್ರಮಕ್ಕೆ ಕರೆ</strong></p>.<p><strong>ರಾಜೇಂದ್ರ ನಗರ, ಅ. 13– </strong>ವ್ಯಕ್ತಿಗಳ ಕನಿಷ್ಠ ಹಾಗೂ ಪರಮಾವಧಿ ಮಾಸಿಕ ವರಮಾನಗಳಲ್ಲಿರುವ ಭಾರಿ ಅಂತರವನ್ನು ವಾಸ್ತವಿಕ ಹಾಗೂ ಪೂರ್ವನಿಯೋಜಿತ ನಿರ್ದಿಷ್ಟ ಕ್ರಮಗಳಿಂದ ಕಡಿಮೆ ಮಾಡಬೇಕು ಎಂದು ಜಗಜೀವನರಾಂ ಇಂದು ಕರೆ ಇತ್ತರು.</p>.<p>ಕನಿಷ್ಠ, ಗರಿಷ್ಠ ಆದಾಯಗಳಿಗೆ ಇರಬೇಕಾದ ಪ್ರಮಾಣವೊಂದನ್ನು ವಾಸ್ತವಿಕ ಹಾಗೂ ವ್ಯಾವಹಾರಿಕ ರೀತಿಯಲ್ಲಿ ಮೊದಲು ನಿರ್ಧರಿಸಿ, ಜಾರಿಗೆ ತರಬೇಕು. ರಾಷ್ಟ್ರೀಯ ವರಮಾನ ಏರಿಕೆ ಅನುಸರಿಸಿ ಕನಿಷ್ಠ ವರಮಾನದಲ್ಲಿಯೂ ಉಂಟಾಗುವ ಏರಿಕೆಯನ್ನು ಗಣನೆಗೆ ತೆಗೆದುಕೊಂಡು, ಈ ಪ್ರಮಾಣವನ್ನು ಕಾಲಕಾಲಕ್ಕೆ ಪುನರ್ ವಿಮರ್ಶಿಸಬೇಕು ಎಂದು ರಾಂ ನುಡಿದರು.</p>.<p><strong>ಕಾವೇರಿ ಜಲ ವಿವಾದ ಚರ್ಚೆ ಸಫಲವಾಗದು?</strong></p>.<p><strong>ಬೆಂಗಳೂರು, ಅ. 13– </strong>1924ರ ಕಾವೇರಿ ನೀರು ಒಪ್ಪಂದದ ಬಗ್ಗೆ ಮೈಸೂರು, ಮದರಾಸ್ ರಾಜ್ಯಗಳ ನಡುವೆ ಮೂಲಭೂತ ಭಿನ್ನಾಭಿಪ್ರಾಯವಿರು<br />ವುದರಿಂದ ಈ ತಿಂಗಳು 27ರಂದು ನಡೆಯುವ ಅಂತಿಮ ಮಾತುಕತೆ ಫಲಪ್ರದವಾಗುವ ನಂಬಿಕೆಯಿಲ್ಲ.</p>.<p>ಕಾವೇರಿ ನೀರು ಹಂಚಿಕೆಯ ಬಗ್ಗೆ ನಿನ್ನೆ ದೆಹಲಿಯಲ್ಲಿ ಕೇಂದ್ರದ ನೀರಾವರಿ ಸಚಿವರ ಹಾಜರಿಯಲ್ಲಿ ಮೈಸೂರು, ಮದರಾಸ್ ಹಾಗೂ ಕೇರಳ ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ನಗರಕ್ಕೆ ಹಿಂದಿರುಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>