ಅಂಬರೀಷ್ ಬದುಕಿದ್ದರೆ ಸರ್ಕಾರದ ಈ ನಿರ್ಧಾರವನ್ನು ಸರ್ವಥಾ ಒಪ್ಪುತ್ತಿರಲಿಲ್ಲ. ಭವಿಷ್ಯದಲ್ಲಿ ಅಂಬರೀಷ್ ಅವರಂತಹ ಅಸಂಖ್ಯ ಪ್ರತಿಭೆಗಳಿಗೆ ಜನ್ಮ ನೀಡಲಿರುವ ಕಂಠೀರವ ಸ್ಟುಡಿಯೊದಂತಹ ಕಲೆಯ ಜೀವಂತ ಮಂದಿರವನ್ನು ಈ ರೀತಿ ಮೃತರ ಸ್ಮಾರಕವನ್ನಾಗಿಸಲು ಅಭಿಮಾನಿಗಳೂ ಒಪ್ಪಲಾರರು. ಪ್ರತಿಯೊಬ್ಬ ಸಾಧಕನಿಗೂ ಹೀಗೆ ಅವನ ಕರ್ಮಭೂಮಿಯಲ್ಲೇ ಸಮಾಧಿ ಅಥವಾ ಸ್ಮಾರಕ ನಿರ್ಮಿಸುತ್ತಾ ಹೋದರೆ ವಿಶ್ವವಿದ್ಯಾಲಯ, ಕ್ರೀಡಾಂಗಣ, ಕಲಾಕ್ಷೇತ್ರ, ಸ್ಟುಡಿಯೊ, ವಿಧಾನಸೌಧ- ವಿಕಾಸಸೌಧ ಮುಂತಾದ ಕರ್ಮಭೂಮಿಗಳೆಲ್ಲ ಮೃತರ ಸ್ಮಾರಕಗಳಾಗಿ ಮಾರ್ಪಡುತ್ತವೆ.