ನಾನು ಮಡಿವಾಳ. ಆದರೆ ಆದಾಯದ ಕಾರಣಕ್ಕಾಗಿ ನನ್ನ ಮಕ್ಕಳು ಸರ್ಕಾರಿ ಕೆಲಸ ಪಡೆಯಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ವರ್ಗದಲ್ಲೇ ಪೈಪೋಟಿ ನಡೆಸಬೇಕಿದೆ. ಜಾತಿಯ ಕಾರಣಕ್ಕೆ ಶೋಷಣೆ, ದಬ್ಬಾಳಿಕೆ ಗಳನ್ನು ಇಂದಿಗೂ ಅನುಭವಿಸುತ್ತಿರುವ ನಾವು, ಮೀಸಲಾತಿಯಲ್ಲೂ ಮೂಲೋತ್ಪಾಟನೆಯಾಗಿ ಶೋಷಣೆ ಅನುಭವಿಸುವಂತಾಗಿದೆ. ಸಾಮಾಜಿಕ ನ್ಯಾಯ ಪಡೆಯಲು ವಕೀಲರಿಲ್ಲದ ಕಕ್ಷಿದಾರರ ಅನಾಥ ಪ್ರಜ್ಞೆಯನ್ನು ನಾವು ಅನುಭವಿಸುತ್ತಿದ್ದೇವೆ. ಆದಾಯಮಿತಿ ನಿಗದಿ ಮಾಡುವುದಾದರೆ ಮೀಸಲಾತಿ ಪಡೆಯುವ ಎಲ್ಲಾ ಸಮುದಾಯ ಹಾಗೂ ವರ್ಗಗಳಿಗೂ ನಿಗದಿ ಮಾಡಲಿ. ಈ ಬಗೆಯ ತಾರತಮ್ಯ ಯಾವ ನ್ಯಾಯ?