ಈ ಚರ್ಚೆಯಲ್ಲಿ ದಲಿತರ ಬಗೆಗಿನ ನಿಜ ಕಾಳಜಿಗಿಂತಲೂ ಕೆಸರೆರಚಾಟ ಮತ್ತು ಸ್ವಾರ್ಥಸಾಧನೆಯೇ ಎದ್ದು ಕಾಣುತ್ತಿದೆ. ದಲಿತರಿಗೆ ರಾಜಕೀಯ ಸ್ಥಾನಮಾನ ನೀಡುವುದರಿಂದ ನಮ್ಮ ಸಾಮಾಜಿಕ ಪರಿಸರದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಸಾಧ್ಯ. ಅದನ್ನು ರಚನಾತ್ಮಕ ನೆಲೆಯಲ್ಲಿ ಪರಿಭಾವಿಸುವ ಪಕ್ವತೆಯನ್ನು ಜನಸಮುದಾಯದಲ್ಲಿ ಮೂಡಿಸಬೇಕು. ಮೇಲಿನ ಮಟ್ಟದಲ್ಲಿ ಯಾರೋ ಒಬ್ಬರಿಗೆ ಸ್ಥಾನಮಾನ ಕಲ್ಪಿಸುವುದಕ್ಕೆ ಇದು ಸೀಮಿತವಾಗಬಾರದು. ಒಬ್ಬ ಸಾಮಾನ್ಯ ದಲಿತನೂ ತಳಮಟ್ಟದಲ್ಲಿ ನೀತಿ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾಗಬೇಕು.
ರಾಧಿಕಾ,ಕುಂದಾಪುರ