‘ಅವಸರವೇ ಅಪಘಾತಕ್ಕೆ ಕಾರಣ’ ವರದಿಯು (ಪ್ರ.ವಾ., ಅ. 22) ಸೋಜಿಗ ಉಂಟುಮಾಡುವಂತಿದೆ. ದ್ವಿಚಕ್ರ ವಾಹನ ಸವಾರರು ಹೆಚ್ಚು ಸಾವಿಗೀಡಾಗುತ್ತಿರುವ ಅಂಶ ಗಮನಿಸಬೇಕಾದುದು. ಬಯಲುಸೀಮೆ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳನ್ನು ಓಡಿಸುವ ರೀತಿ ನೋಡಿದರೆ ಭಯವಾಗುತ್ತದೆ. ಈ ವಾಹನಗಳಲ್ಲಿ ಮೂರ್ನಾಲ್ಕು ಜನ ಸಂಚರಿಸುವುದು, ಸವಾರರು ಬೈಕ್ ಚಲಾಯಿಸುತ್ತಲೇ ಮೊಬೈಲ್ ಅನ್ನು ಎಡಗೈಲಿ ಹಿಡಿದು ಅಥವಾ ಕಿವಿಗೆ ಒತ್ತಿ ಹಿಡಿದು ಮಾತನಾಡುವುದು ಸರ್ವೇಸಾಮಾನ್ಯ ದೃಶ್ಯಗಳಾಗಿವೆ. ಈ ರೀತಿ ವಾಹನ ಚಲಾಯಿಸಿದರೆ ಅಪಘಾತವಾಗದೆ ಇರುತ್ತದೆಯೇ?