ರಾಹುಲ್ ಗಾಂಧಿ ಅವರು ನಡೆಸುತ್ತಿರುವ ‘ಭಾರತ್ ಜೋಡೊ’ ಯಾತ್ರೆ ಕುರಿತ ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಬಿ. ಶೆಟ್ಟಿ ಅವರ ಲೇಖನವನ್ನು ಓದಿದಾಗ (ಪ್ರ.ವಾ., ಡಿ. 15), ಹಿಂದಿನ ಬೇಸರ ಮರುಕಳಿಸಿತು. ಯಾತ್ರೆಯ ಬಗೆಗಿನ ಈ ಎಲ್ಲ ಸಕಾರಾತ್ಮಕ ವಿಶ್ಲೇಷಣೆ, ಆಶಯ, ನಿರೀಕ್ಷೆಗಳು, ರಾಜ್ಯದಲ್ಲಿ ಅಧಿಕಾರ ಹಿಡಿಯುವ ತರಾತುರಿಯಲ್ಲಿರುವ ಕಾಂಗ್ರೆಸ್ ಪಕ್ಷದಲ್ಲಿ, ಅದರ ಮುಖಂಡರಲ್ಲಿ ಕಿಂಚಿತ್ತಾದರೂ ಕಂಡುಬರುತ್ತಿವೆಯೇ? ಅಷ್ಟೇಕೆ, ಈಗಾಗಲೇ ಅಧಿಕಾರ ಹಿಡಿದಿರುವ ಹಿಮಾಚಲ ಪ್ರದೇಶದ (ಅಲ್ಲಿ ಭಾರತ ಜೋಡಿಸುವ ಯಾತ್ರೆ ಕೂಡ ಪ್ರಭಾವ ಬೀರಿರುತ್ತದೆ ಎಂದು ಸ್ವತಃ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ) ಸರ್ಕಾರದ ನಡೆ ನುಡಿಗಳಲ್ಲಿ ಏನಾದರೂ ಬದಲಾವಣೆ ಬಯಸಬಹುದೇ? ಸಕಾರಾತ್ಮಕ ಉತ್ತರ ನಿರೀಕ್ಷಿಸಲು ಸ್ವಲ್ಪ ಕಷ್ಟವಾಗುತ್ತದೆ.