ಅದೇ ರೀತಿ, ಈಗ ಕೇಂದ್ರ ಸರ್ಕಾರ ಘೋಷಿಸಿರುವ ₹ 20 ಲಕ್ಷ ಕೋಟಿಯ ಪ್ಯಾಕೇಜನ್ನು ಕಾರ್ಯರೂಪಕ್ಕೆ ತರುವಲ್ಲಿಯೂ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸಬೇಕಿದೆ. ನೆಲಕಚ್ಚಿರುವ ಕೃಷಿ, ಔದ್ಯಮಿಕ, ಸಾಮಾಜಿಕ, ವಾಣಿಜ್ಯ ಕ್ಷೇತ್ರಗಳ ಚಟುವಟಿಕೆಗಳು ಗರಿಗೆದರಿ, ಪೇಟೆಯಲ್ಲಿ ಹಣದ ಚಲಾವಣೆ ಆಗಬೇಕಾದರೆ ಬ್ಯಾಂಕುಗಳು ಇನ್ನು ಮುಂದೆಯೂ ಕೊರೊನಾ ವಾರಿಯರ್ಸ್ ರೀತಿಯಲ್ಲೇ ಕೆಲಸ ಮಾಡಬೇಕಾಗಿದೆ. ಇದನ್ನೆಲ್ಲ ಪರಿಗಣಿಸಿ, ಬ್ಯಾಂಕ್ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಪ್ರಾಮುಖ್ಯ ನೀಡಬೇಕು.