<p>ಗೋವು ಮತ್ತು ಗೋಮಾಂಸ ಭಕ್ಷಣೆಯ ವಿಚಾರದಲ್ಲಿ ಎಷ್ಟರಮಟ್ಟಿಗಿನ ಚರ್ಚೆ ನಡೆಯುತ್ತಿದೆಯೆಂದರೆ, ಅದು ರಾಜಕೀಯ ಮುಖಂಡರ ಮಧ್ಯೆ ವೈಯಕ್ತಿಕ, ಕೆಳಮಟ್ಟದ, ಏಕವಚನದ ಜಂಗಿ ಕುಸ್ತಿಗೂ ಕಾರಣವಾಗುತ್ತಿದೆ. ಗೋಮಾಂಸ ತಿನ್ನುವುದೇ ಸಾಧನೆಯೇ ಎಂದು ಒಬ್ಬರು ಕೇಳಿದರೆ, ನಾನು ಗೋವು, ಹಂದಿ ಮಾಂಸ ಏನಾದರೂ ತಿನ್ನುತ್ತೇನೆ ಎಂದು ಇನ್ನೊಬ್ಬರು ಸವಾಲು ಹಾಕುತ್ತಾರೆ. ಇವರುಗಳ ವಾದ ಏನೇ ಇರಲಿ, ಒಂದಂತೂ ಸತ್ಯ. ಇತ್ತೀಚಿನ ದಿನಗಳಲ್ಲಿ ಒಟ್ಟಾರೆ ಜಾನುವಾರುಗಳ ಸಂಖ್ಯೆಯೇ ತೀರಾ ಇಳಿಮುಖವಾಗುತ್ತಿದೆ.</p>.<p>ಹಿಂದೆ ಊರ ಹೊರಗೆ ದನಗಳು ಮೇಯಲು ಹೊರಟರೆ ಅವುಗಳ ಸಗಣಿ ಹಿಡಿಯುವುದಕ್ಕೆ ಮಹಿಳೆಯರು ಬುಟ್ಟಿ ಹಿಡಿದು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಸ್ವಾಮಿ, ದನಗಳ ವಿಚಾರದಲ್ಲಿ ಯಾಕೆ ಬಡಿದಾಡುತ್ತೀರಿ? ಇನ್ನಷ್ಟು ದಿನಗಳು ಕಳೆದರೆ ನಮಗೆ ಎಮ್ಮೆ, ಹಸುಗಳ ಸಗಣಿಯೂ ಸಿಗುವುದಿಲ್ಲ. ಈಗಲೇ ನಗರ ಪ್ರದೇಶಗಳಲ್ಲಿ ಹಣ ಕೊಟ್ಟು ಸಗಣಿ ಖರೀದಿಸುತ್ತಾರೆ. ಗೃಹ ಪ್ರವೇಶದ ವೇಳೆ ಪೂಜೆಗಾಗಿ ಬಾಡಿಗೆ ಕೊಟ್ಟು ಹಸುವನ್ನು ಕರೆತರುತ್ತಾರೆ. ಇನ್ನು ಮುಂದೆ ಹೇಗೋ ದೇವರೇ ಬಲ್ಲ.</p>.<p><em><strong>- ನಾರಾಯಣರಾವ ಕುಲಕರ್ಣಿ,ಹಿರೇಅರಳಿಹಳ್ಳಿ, ಕೊಪ್ಪಳ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗೋವು ಮತ್ತು ಗೋಮಾಂಸ ಭಕ್ಷಣೆಯ ವಿಚಾರದಲ್ಲಿ ಎಷ್ಟರಮಟ್ಟಿಗಿನ ಚರ್ಚೆ ನಡೆಯುತ್ತಿದೆಯೆಂದರೆ, ಅದು ರಾಜಕೀಯ ಮುಖಂಡರ ಮಧ್ಯೆ ವೈಯಕ್ತಿಕ, ಕೆಳಮಟ್ಟದ, ಏಕವಚನದ ಜಂಗಿ ಕುಸ್ತಿಗೂ ಕಾರಣವಾಗುತ್ತಿದೆ. ಗೋಮಾಂಸ ತಿನ್ನುವುದೇ ಸಾಧನೆಯೇ ಎಂದು ಒಬ್ಬರು ಕೇಳಿದರೆ, ನಾನು ಗೋವು, ಹಂದಿ ಮಾಂಸ ಏನಾದರೂ ತಿನ್ನುತ್ತೇನೆ ಎಂದು ಇನ್ನೊಬ್ಬರು ಸವಾಲು ಹಾಕುತ್ತಾರೆ. ಇವರುಗಳ ವಾದ ಏನೇ ಇರಲಿ, ಒಂದಂತೂ ಸತ್ಯ. ಇತ್ತೀಚಿನ ದಿನಗಳಲ್ಲಿ ಒಟ್ಟಾರೆ ಜಾನುವಾರುಗಳ ಸಂಖ್ಯೆಯೇ ತೀರಾ ಇಳಿಮುಖವಾಗುತ್ತಿದೆ.</p>.<p>ಹಿಂದೆ ಊರ ಹೊರಗೆ ದನಗಳು ಮೇಯಲು ಹೊರಟರೆ ಅವುಗಳ ಸಗಣಿ ಹಿಡಿಯುವುದಕ್ಕೆ ಮಹಿಳೆಯರು ಬುಟ್ಟಿ ಹಿಡಿದು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಸ್ವಾಮಿ, ದನಗಳ ವಿಚಾರದಲ್ಲಿ ಯಾಕೆ ಬಡಿದಾಡುತ್ತೀರಿ? ಇನ್ನಷ್ಟು ದಿನಗಳು ಕಳೆದರೆ ನಮಗೆ ಎಮ್ಮೆ, ಹಸುಗಳ ಸಗಣಿಯೂ ಸಿಗುವುದಿಲ್ಲ. ಈಗಲೇ ನಗರ ಪ್ರದೇಶಗಳಲ್ಲಿ ಹಣ ಕೊಟ್ಟು ಸಗಣಿ ಖರೀದಿಸುತ್ತಾರೆ. ಗೃಹ ಪ್ರವೇಶದ ವೇಳೆ ಪೂಜೆಗಾಗಿ ಬಾಡಿಗೆ ಕೊಟ್ಟು ಹಸುವನ್ನು ಕರೆತರುತ್ತಾರೆ. ಇನ್ನು ಮುಂದೆ ಹೇಗೋ ದೇವರೇ ಬಲ್ಲ.</p>.<p><em><strong>- ನಾರಾಯಣರಾವ ಕುಲಕರ್ಣಿ,ಹಿರೇಅರಳಿಹಳ್ಳಿ, ಕೊಪ್ಪಳ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>