‘ಸುಲಲಿತ ವಹಿವಾಟು: ಕುಸಿದ ಕರ್ನಾಟಕ’ ವರದಿ (ಪ್ರ.ವಾ., ಸೆ. 6) ಓದಿ ವಿಷಾದವಾಯಿತು. 2018ರಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರುಈ ಶ್ರೇಯಾಂಕ ನೀಡಿಕೆಗೆ ಒರೆಗಲ್ಲಾದ ಹತ್ತು ಅಂಶಗಳ ಪೈಕಿ ಮೂರರಲ್ಲಾದರೂ ಭಾರತ ಸುಧಾರಿಸಲು ಸಾಧ್ಯ ಎಂದಿದ್ದರು. ಜಮೀನು ಹೊಂದಲು ಹಾಗೂ ಕಟ್ಟಡ ನಿರ್ಮಾಣಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಮಟ್ಟದಲ್ಲೇ ತ್ವರಿತ ಅನುಮತಿ, ಗಡಿಗಳ ಆಚೆ ವ್ಯಾಪಾರ– ವಹಿವಾಟುಗಳನ್ನು ಸುಲಲಿತಗೊಳಿಸುವುದು, ಒಪ್ಪಂದಗಳ ಪರಿಣಾಮಕಾರಿ ಜಾರಿ ಕುರಿತು ಮಾತನಾಡಿದ್ದರು.