ಆಳುವ ವರ್ಗಗಳು ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಮಾಡುವುದರ ಫಲವಾಗಿ ಪ್ರಕೃತಿಯ ವ್ಯವಸ್ಥೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಮೊದಲಿನ ಸಮತೋಲನ ಸ್ಥಿತಿಗೆ ಬರಲು ಪ್ರಕೃತಿ ನಡೆಸುವ ಸರ್ಕಸ್ಸುಗಳೇ ಅತಿವೃಷ್ಟಿ, ಅನಾವೃಷ್ಟಿ ಮುಂತಾದವು. ಇಲ್ಲಿ ಇನ್ನೊಂದು ವಿಚಿತ್ರವೆಂದರೆ, ನೈಸರ್ಗಿಕ ವಿಕೋಪಗಳಿಗೆ ತುತ್ತಾಗಿ ಆಸ್ತಿ ಪಾಸ್ತಿ ನಾಶವಾದವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ! ಅಂದರೆ, ಒಂದು ಕಡೆ ಪರಿಸರ ನಾಶಕ್ಕೆ ಅಂಕಿತ ಹಾಕಿ, ಅದರಿಂದ ಜನರಿಗೆ ತೊಂದರೆ ಎದುರಾದಾಗ ಸರ್ಕಾರವೇ ಮತ್ತೆ ಪರಿಹಾರ ನೀಡಲು ಮುಂದಾಗುತ್ತದೆ. ತೊಟ್ಟಿಲು ತೂಗುವವರೂ ಅವರೇ, ಮಗುವನ್ನು ಚಿವುಟುವವರೂ ಅವರೇ!