ಆದರೆ ಅನೇಕ ವೇಳೆ ಮನೆಯವರೇ ಅದನ್ನು ಕಸಿದುಕೊಳ್ಳುತ್ತಾರೆ, ಇಲ್ಲವೇ ಬಾಣಂತಿಯರು ತಮ್ಮ ಹಾಗೂ ಮಗುವಿನ ಆರೋಗ್ಯವನ್ನು ಲೆಕ್ಕಿಸದೆ ಆ ಹಣದಲ್ಲಿ ಒಡವೆ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಸರ್ಕಾರ ಈ ನೆರವನ್ನು ಇನ್ನಷ್ಟು ವೈಜ್ಞಾನಿಕವಾಗಿ ರೂಪಿಸಿ, ಉಪಯೋಗಕ್ಕೆ ಬರುವ ವಸ್ತುಗಳನ್ನು ಕೊಟ್ಟು, ಯೋಜನೆ ಸದುಪಯೋಗ ಆಗುವಂತೆ ನೋಡಿಕೊಳ್ಳಲಿ. ಜೊತೆಗೆ ಮಡಿಲು ಯೋಜನೆ ಮತ್ತೆ ಮುಂದುವರಿಯಲಿ.
ನಳಿನಿ ಡಿ.,ಬೆಂಗಳೂರು