ಆದರೆ, ಪೊಲೀಸರು ಎನ್ಕೌಂಟರ್ ಮಾಡಿ ಕೊಂದದ್ದು ಆರೋಪಿಗಳನ್ನೇ ವಿನಾ ಅಪರಾಧಿಗಳನ್ನಲ್ಲ ಎಂಬ ಪ್ರಾಥಮಿಕ ಸತ್ಯವನ್ನೂ ಮರೆತು ಕೆಲವು ಮಾಧ್ಯಮಗಳು ಈ ಎನ್ಕೌಂಟರ್ ಅನ್ನು ಅನ್ಯಾಯದ ವಿರುದ್ಧ ನ್ಯಾಯದ ಜಯ ಎಂಬಂತೆ ಸಂಭ್ರಮಿಸಿದವು. ಸಮಾಜದ ಗಣ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳು, ಅಧಿಕಾರಸ್ಥರು ಸಹ ತಮ್ಮ ವಿವೇಚನೆ ಕಳೆದುಕೊಂಡು ಈ ಎನ್ಕೌಂಟರ್ ಅನ್ನು ಸಮರ್ಥಿಸಿದ್ದರು. ರಾಜಕಾರಣಿಗಳು, ಶ್ರೀಮಂತ ಉದ್ಯಮಿಗಳ ಮಕ್ಕಳು ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದರೆ ಪೊಲೀಸರು ಇದೇ ರೀತಿ ವರ್ತಿಸುತ್ತಿದ್ದರೇ ಎಂಬ ಪ್ರಶ್ನೆ ಕೆಲವರಮನಸ್ಸಿನಲ್ಲಾದರೂ ಮೂಡಿತ್ತು.