<p>ಅಕ್ರಮಗಳು ನಗರಗಳಲ್ಲಿಯೇ ನಡೆಯಬೇಕೆಂದಿಲ್ಲ, ಹಳ್ಳಿಗಳಲ್ಲಿಯೂ ಇದೀಗ ಯಥೇಚ್ಛವಾಗಿ ನಡೆಯುತ್ತಿವೆ. ಒಂದನೆಯದಾಗಿ, ಪೆಟ್ರೋಲ್ ಮತ್ತು ಡೀಸೆಲ್ ದಂಧೆ. ಪೆಟ್ರೋಲ್ ಬಂಕ್ನಲ್ಲಿ ₹ 102ಕ್ಕೆ ದೊರೆಯುವ ಲೀಟರ್ ಪೆಟ್ರೋಲ್, ಹಳ್ಳಿಗಳ ಡಬ್ಬಿ ಅಂಗಡಿ ಮತ್ತು ದೊಡ್ಡ ಕಿರಾಣಿ ಸ್ಟೋರ್ಗಳಲ್ಲಿ ₹ 120ರಿಂದ 130ಕ್ಕೆ ಮಾರಾಟವಾಗುತ್ತಿದೆ. ₹ 89ಕ್ಕೆ ದೊರೆಯುವ ಲೀಟರ್ ಡೀಸೆಲ್ ₹ 100ರಿಂದ 105ರ ತನಕ ಎಗ್ಗಿಲ್ಲದೇ ರಾಜಾರೋಷವಾಗಿ ಮಾರಾಟವಾಗುತ್ತಿದೆ. ಅದೂ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನೂ ತೆಗೆದುಕೊಳ್ಳದೆ.</p>.<p>ಎರಡನೆಯದಾಗಿ, ಮದ್ಯ ದಂಧೆ. ನಗರದಲ್ಲಿ ₹ 150ರಿಂದ 170ಕ್ಕೆ ದೊರೆಯುವ ಬಿಯರ್, ಹಳ್ಳಿಗಳಲ್ಲಿ<br />₹ 220ರಿಂದ 250ಕ್ಕೆ ಮತ್ತು ಟೆಟ್ರಾ ಪ್ಯಾಕೆಟ್ನಲ್ಲಿ ₹ 55ರಿಂದ 60ಕ್ಕೆ ದೊರೆಯುವ ಮದ್ಯವು ಹಳ್ಳಿಗಳಲ್ಲಿ ₹ 80ರಿಂದ 100ರ ತನಕ ಮಾರಾಟವಾಗುತ್ತಿವೆ. ಇವೆಲ್ಲ ಸ್ಥಳೀಯ ಆಡಳಿತ ಹಾಗೂ ಪೊಲೀಸರಿಗೆ ಗೊತ್ತಿಲ್ಲವೆಂದಲ್ಲ. ಎಲ್ಲರೂ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ ಅಷ್ಟೇ. ಆದಷ್ಟು ಬೇಗ ಹಳ್ಳಿಗಳು ಮೊದಲ ರೂಪಕ್ಕೆ ಬರಲಿ. ಹಳ್ಳಿಗಳಲ್ಲಿ ಇಂತಹವಕ್ಕೆಲ್ಲ ಜಾಗ ಇಲ್ಲದಂತಾಗಲಿ.</p>.<p><strong>ಬಸನಗೌಡ ಪಾಟೀಲ,ಯರಗುಪ್ಪಿ, ಧಾರವಾಡ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಕ್ರಮಗಳು ನಗರಗಳಲ್ಲಿಯೇ ನಡೆಯಬೇಕೆಂದಿಲ್ಲ, ಹಳ್ಳಿಗಳಲ್ಲಿಯೂ ಇದೀಗ ಯಥೇಚ್ಛವಾಗಿ ನಡೆಯುತ್ತಿವೆ. ಒಂದನೆಯದಾಗಿ, ಪೆಟ್ರೋಲ್ ಮತ್ತು ಡೀಸೆಲ್ ದಂಧೆ. ಪೆಟ್ರೋಲ್ ಬಂಕ್ನಲ್ಲಿ ₹ 102ಕ್ಕೆ ದೊರೆಯುವ ಲೀಟರ್ ಪೆಟ್ರೋಲ್, ಹಳ್ಳಿಗಳ ಡಬ್ಬಿ ಅಂಗಡಿ ಮತ್ತು ದೊಡ್ಡ ಕಿರಾಣಿ ಸ್ಟೋರ್ಗಳಲ್ಲಿ ₹ 120ರಿಂದ 130ಕ್ಕೆ ಮಾರಾಟವಾಗುತ್ತಿದೆ. ₹ 89ಕ್ಕೆ ದೊರೆಯುವ ಲೀಟರ್ ಡೀಸೆಲ್ ₹ 100ರಿಂದ 105ರ ತನಕ ಎಗ್ಗಿಲ್ಲದೇ ರಾಜಾರೋಷವಾಗಿ ಮಾರಾಟವಾಗುತ್ತಿದೆ. ಅದೂ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನೂ ತೆಗೆದುಕೊಳ್ಳದೆ.</p>.<p>ಎರಡನೆಯದಾಗಿ, ಮದ್ಯ ದಂಧೆ. ನಗರದಲ್ಲಿ ₹ 150ರಿಂದ 170ಕ್ಕೆ ದೊರೆಯುವ ಬಿಯರ್, ಹಳ್ಳಿಗಳಲ್ಲಿ<br />₹ 220ರಿಂದ 250ಕ್ಕೆ ಮತ್ತು ಟೆಟ್ರಾ ಪ್ಯಾಕೆಟ್ನಲ್ಲಿ ₹ 55ರಿಂದ 60ಕ್ಕೆ ದೊರೆಯುವ ಮದ್ಯವು ಹಳ್ಳಿಗಳಲ್ಲಿ ₹ 80ರಿಂದ 100ರ ತನಕ ಮಾರಾಟವಾಗುತ್ತಿವೆ. ಇವೆಲ್ಲ ಸ್ಥಳೀಯ ಆಡಳಿತ ಹಾಗೂ ಪೊಲೀಸರಿಗೆ ಗೊತ್ತಿಲ್ಲವೆಂದಲ್ಲ. ಎಲ್ಲರೂ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ ಅಷ್ಟೇ. ಆದಷ್ಟು ಬೇಗ ಹಳ್ಳಿಗಳು ಮೊದಲ ರೂಪಕ್ಕೆ ಬರಲಿ. ಹಳ್ಳಿಗಳಲ್ಲಿ ಇಂತಹವಕ್ಕೆಲ್ಲ ಜಾಗ ಇಲ್ಲದಂತಾಗಲಿ.</p>.<p><strong>ಬಸನಗೌಡ ಪಾಟೀಲ,ಯರಗುಪ್ಪಿ, ಧಾರವಾಡ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>