ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಇದು ಸರಿಯಾದುದು. ಇದೇ ವೇಳೆ, ನಡೆದುಬಂದ ಹಾದಿಯ ಬಗೆಗೆ, ಸಾಧನೆಗಳ ಬಗೆಗೆ, ಸಮಸ್ಯೆಗಳ ಬಗೆಗೆ ವಸ್ತುನಿಷ್ಠವಾಗಿ ಅವಲೋಕನ ಆಗಬೇಕಾದುದು ಕೂಡ ಅಷ್ಟೇ ಅಗತ್ಯ. ಎಡವಿದ್ದು ಎಲ್ಲಿ ಎಂಬುದು ಗೊತ್ತಾದರೆ ತಿದ್ದಿಕೊಳ್ಳಬಹುದು. ಅದಕ್ಕಿಂತ ಹೆಚ್ಚಿಗೆ ವಸ್ತುಸ್ಥಿತಿಯನ್ನು ಎಲ್ಲರ ಮುಂದಿಡುವುದು ಯುಕ್ತವಾದುದು.