ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಳುವ ಮೇಧಾವಿಗಳನ್ನು ಗುರುತಿಸಿ

Last Updated 26 ಜೂನ್ 2022, 20:00 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರವು ನಾಡಿನ ಮೂವರು ಸಾಧಕರಿಗೆ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಿರುವುದು ಬಹು ಸಂತೋಷ. ಇವರ ಸಾಧನೆ ದೊಡ್ಡದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಎಲೆ ಮರೆಯ ಕಾಯಿಯ ಹಾಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಅನನ್ಯ ಸೇವೆ ಸಲ್ಲಿಸುತ್ತಿರುವವರು ಅಸಂಖ್ಯ. ಅವರು ಅಜ್ಞಾತ ಪ್ರತಿಭಾಶಾಲಿಗಳಾಗಿಯೇ ಉಳಿಯಬಾರದು.

ಹೊನ್ನನ್ನು ಪದೇ ಪದೇ ಹೊಗಳಿ ಮತ್ತೆ ಮತ್ತೆ ಅದಕ್ಕೆ ಹೊಳಪು ನೀಡುವ ಅಗತ್ಯವಿಲ್ಲ. ತಲಾ ಐದು ಲಕ್ಷ ರೂಪಾಯಿಗಳ ಮೂರು ಭಾರಿ ಮೊತ್ತದ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಬದಲು ಸರ್ಕಾರವು ಹತ್ತಾರು ಮಂದಿ ಅರಳುವ ಮೇಧಾವಿಗಳನ್ನು ಗುರುತಿಸಿ, ಅವರಿಗೆ ತಲಾ ₹ 25,000 ನಗದು ಬಹುಮಾನವುಳ್ಳ ಪ್ರಶಸ್ತಿಯಿತ್ತು ಅವರ ಬೆನ್ನು ತಟ್ಟುವುದು ಅತ್ಯಂತ ಸಮಂಜಸವಾದೀತು.

-ಬಿಂಡಿಗನವಿಲೆ ಭಗವಾನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT