ಹೊನ್ನನ್ನು ಪದೇ ಪದೇ ಹೊಗಳಿ ಮತ್ತೆ ಮತ್ತೆ ಅದಕ್ಕೆ ಹೊಳಪು ನೀಡುವ ಅಗತ್ಯವಿಲ್ಲ. ತಲಾ ಐದು ಲಕ್ಷ ರೂಪಾಯಿಗಳ ಮೂರು ಭಾರಿ ಮೊತ್ತದ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಬದಲು ಸರ್ಕಾರವು ಹತ್ತಾರು ಮಂದಿ ಅರಳುವ ಮೇಧಾವಿಗಳನ್ನು ಗುರುತಿಸಿ, ಅವರಿಗೆ ತಲಾ ₹ 25,000 ನಗದು ಬಹುಮಾನವುಳ್ಳ ಪ್ರಶಸ್ತಿಯಿತ್ತು ಅವರ ಬೆನ್ನು ತಟ್ಟುವುದು ಅತ್ಯಂತ ಸಮಂಜಸವಾದೀತು.