ಕಥೆ, ಚಿತ್ರಕಥೆ, ನಟನೆ ಹಾಗೂ ಮೇರು ತಂತ್ರಜ್ಞಾನದಿಂದ ಪ್ರಖ್ಯಾತಿ ಪಡೆಯಬೇಕಾದ ಕನ್ನಡ ಚಿತ್ರರಂಗ ಇಂದು ಕೆಲವರ ವೈಯಕ್ತಿಕ ಬದುಕಿನ ಆರೋಪ ಪ್ರತ್ಯಾರೋಪಗಳಿಂದ ಜರ್ಜರಿತವಾಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಿನಿಮಾಗಳಲ್ಲಿ ವೀಕ್ಷಕರಿಗೆ ತಾಳ್ಮೆ, ಸಂಯಮ ಹಾಗೂ ನೀತಿ ಪಾಠದ ಉದ್ದುದ್ದ ಡೈಲಾಗ್ ಹೊಡೆಯುವ ಇದೇ ಕೆಲವು ನಟ ಹಾಗೂ ನಿರ್ದೇಶಕರು, ನಿಜ ಜೀವನದಲ್ಲಿ ಅವೆಲ್ಲವನ್ನೂ ಗಾಳಿಗೆ ತೂರಿ ಬಹಿರಂಗವಾಗಿಯೇ ಮಾಧ್ಯಮ ಗಳೆದುರು ಅಸಂಬದ್ಧ ಪದಗಳನ್ನು ಬಳಸುವುದು ಅಸಹ್ಯಕರ ಬೆಳವಣಿಗೆ.