ರಾಜ್ಯವನ್ನು ಸರಿದಾರಿಯಲ್ಲಿ ಮುನ್ನಡೆಸುವ ಹೊಣೆಗಾರಿಕೆ ಮುಖ್ಯಮಂತ್ರಿಯದ್ದಾಗಿರುತ್ತದೆ. ಭಾರತವು ಒಕ್ಕೂಟ ಗಣತಂತ್ರವಾಗಿದ್ದು, ರಾಜ್ಯಗಳು ಕೇಂದ್ರದ ಅಡಿಯಾಳಲ್ಲ ಎಂಬುದನ್ನು ಸಂವಿಧಾನದಲ್ಲಿಯೇ ಉಲ್ಲೇಖಿಸಲಾಗಿದೆ. ಜನರಿಂದ ಚುನಾಯಿತರಾಗಿರುವ, ಶಾಸಕಾಂಗವು ಶಾಸನಬದ್ಧವಾಗಿ ಆಯ್ಕೆ ಮಾಡಿರುವ ಮುಖ್ಯಮಂತ್ರಿಯನ್ನು ಸಂವಿಧಾನಾತ್ಮಕವಾಗಿ ತೆಗೆದುಹಾಕುವ ಹಕ್ಕು ಆಯಾ ಪಕ್ಷದ ಶಾಸಕರಿಗಿರುತ್ತದೆ. ಆದರೆ ಹೈಕಮಾಂಡ್ ಗದಾಪ್ರಹಾರ ಮಾಡಿರುವುದು ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾದುದು. ಇದು ರಾಷ್ಟ್ರೀಯ ಪಕ್ಷಕ್ಕೆ ಶೋಭೆ ತರುವುದಿಲ್ಲ