ಮುಂಗಾರು ಆರಂಭವಾಗುತ್ತಲೇ ಗೋದಾಮುಗಳಲ್ಲಿ ಶೇಖರಿಸಿಟ್ಟಿದ್ದ ಭಾರಿ ಪ್ರಮಾಣದ ರಸಗೊಬ್ಬರ ಮತ್ತು ಪೀಡೆನಾಶಕ ವಿಷದ್ರವ್ಯಗಳು ಅಂಗಡಿಗಳ ಮೂಲಕ ಹಳ್ಳಿಹಾದಿ ಹಿಡಿಯುತ್ತವೆ. ಅಗತ್ಯಕ್ಕಿಂತ ಹತ್ತಿಪ್ಪತ್ತು, ಐವತ್ತು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಅವುಗಳನ್ನು ರೈತರ ಹೊಲಕ್ಕೆ ತಳ್ಳಲು ಎಲ್ಲ ವ್ಯವಸ್ಥೆಗಳೂ ಸಜ್ಜಾಗುತ್ತವೆ. ಜೇನ್ನೊಣ, ಚಿಟ್ಟೆ, ದುಂಬಿ, ಎರೆಹುಳಗಳೇ ಮುಂತಾದ ಹಿತಜೀವಿಗಳ ಸಂತತಿ ನಾಶವಾಗುತ್ತದೆ.