ದಸರಾ ಮಹೋತ್ಸವವು ಚಾಮುಂಡೇಶ್ವರಿಯ ಅನುಗ್ರಹದಿಂದ ಚೆನ್ನಾಗಿ ಜರುಗಿತು. ಆದರೆ, ಚಿನ್ನದ ಅಂಬಾರಿ ಹೊತ್ತ ಅರ್ಜುನನ ಛಾಯಾಚಿತ್ರ ತೆಗೆದುಕೊಳ್ಳಲು ಜನ ಮುಗಿಬಿದ್ದದ್ದರಿಂದ, ಅರ್ಜುನ ಹಾಗೂ ಆತನ ಮಾವುತನಿಗೆ ಇದರಿಂದ ತೊಂದರೆಯಾಯಿತು. ಲಕ್ಷಾಂತರ ಜನ ಸೇರುವಲ್ಲಿ ಮೂಕಪ್ರಾಣಿಗಳಿಗೆ ತೊಂದರೆಯಾಗದಂತೆ ಸಾರ್ವಜನಿಕರು ನಡೆದುಕೊಳ್ಳಬೇಕು.