ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ: ಎಚ್ಚರ ಅಗತ್ಯ

Last Updated 11 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ದಸರಾ ಮಹೋತ್ಸವವು ಚಾಮುಂಡೇಶ್ವರಿಯ ಅನುಗ್ರಹದಿಂದ ಚೆನ್ನಾಗಿ ಜರುಗಿತು. ಆದರೆ, ಚಿನ್ನದ ಅಂಬಾರಿ ಹೊತ್ತ ಅರ್ಜುನನ ಛಾಯಾಚಿತ್ರ ತೆಗೆದುಕೊಳ್ಳಲು ಜನ ಮುಗಿಬಿದ್ದದ್ದರಿಂದ, ಅರ್ಜುನ ಹಾಗೂ ಆತನ ಮಾವುತನಿಗೆ ಇದರಿಂದ ತೊಂದರೆಯಾಯಿತು. ಲಕ್ಷಾಂತರ ಜನ ಸೇರುವಲ್ಲಿ ಮೂಕಪ್ರಾಣಿಗಳಿಗೆ ತೊಂದರೆಯಾಗದಂತೆ ಸಾರ್ವಜನಿಕರು ನಡೆದುಕೊಳ್ಳಬೇಕು.

ಫೋಟೊ ಫ್ಲ್ಯಾಷ್‌ನಿಂದ ಗಾಬರಿಗೊಂಡ ಅರ್ಜುನ, ದೇಹವನ್ನು ಅಲುಗಾಡಿಸುತ್ತಿತ್ತು. ಪ್ರಾಣಿಗಳ ಗುಣ ಸ್ವಭಾವ ಅರಿಯದ ಸಾರ್ವಜನಿಕರು ಫೋಟೊ ತೆಗೆಯಲು ಮುಂದಾಗುತ್ತಲೇ ಇದ್ದರು. ಈ ಬಗ್ಗೆ ಸಾರ್ವಜನಿಕರಿಗೆ ಮುಂಚಿತವಾಗಿಯೇ ಸೂಚನೆ ನೀಡಬೇಕಾದ ಅಗತ್ಯವಿತ್ತು.

ಗಜಪಡೆಯು ಫೋಟೊ ಫ್ಲ್ಯಾಷ್‌ನಿಂದ ಬೆದರಿ ಒಂದು ವೇಳೆ ದಿಕ್ಕಾಪಾಲಾಗಿ ಓಡಿದ್ದಿದ್ದರೆ ಅನಾಹುತ ಆಗುತ್ತಿತ್ತು. ಮೆರವಣಿಗೆ ವೇಳೆ ಆನೆಗಳ ಫೋಟೊ ತೆಗೆಯುವುದನ್ನು ನಿರ್ಬಂಧಿಸಿ.

–ಎಂ.ಎಸ್.ಉಷಾ ಪ್ರಕಾಶ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT