ಇನ್ನು ಸುದ್ದಿಯ ಸುದ್ದಿಗೆ ಬಂದರೆ, ಈ ಮುಂಚೆ ಒಬ್ಬನೇ ಬಾಣಸಿಗನಿದ್ದು, ಅವನು ಮಾಡಿ ಬಡಿಸುತ್ತಿದ್ದದ್ದು ರುಚಿಯಾಗಿಯೂ, ಕರ್ಣಹಿತವಾಗಿಯೂ ಇರುತ್ತಿತ್ತು. ಆದರೆ, ಈಗ ಅಸಂಖ್ಯಾತ ಬಾಣಸಿಗರು ಒಂದೇ ಸುದ್ದಿಯನ್ನು ವಿಧ ವಿಧವಾಗಿ ರುಬ್ಬಿ ರುಬ್ಬಿ ತಮಗೆ ಇಷ್ಟ ಬಂದಂತೆ ಬಡಿಸುತ್ತಾ ಇರುವುದನ್ನು ನೋಡಿದರೆ, ಆ ಭಗವಂತ ನಮ್ಮ ಕಣ್ಣಿಗೆ ರೆಪ್ಪೆ ಕೊಟ್ಟಂತೆ, ಕಿವಿಗೂ ಯಾಕೆ ಕೊಡಲಿಲ್ಲಪ್ಪ ಅಂತ ಬೇಜಾರಾಗ್ತಿದೆ....!–ವಿ.ವಿಜಯೇಂದ್ರ ರಾವ್, ಬೆಂಗಳೂರು