ಕೆಲವು ತಾಂತ್ರಿಕ ಕಾರಣಗಳಿಂದ ಎಷ್ಟೋ ಅರ್ಹ ರೈತರಿಗೆ ಈ ಯೋಜನೆಯ ಲಾಭ ಇನ್ನೂ ಸಮರ್ಪಕವಾಗಿ ತಲುಪಿಲ್ಲ. ಕೆಲವು ರೈತರ ಹೆಸರುಗಳು ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿದ್ದರೂ ಹಣ ಮಾತ್ರ ಸಂದಾಯವಾಗಿಲ್ಲ. ಇಂತಹ ಹಲವಾರು ಗೊಂದಲಗಳಿರುವ ಸಂದರ್ಭದಲ್ಲಿ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕೆಂದರೆ, ಅವು ಕಾರ್ಯ ನಿರ್ವಹಿಸದಿರುವುದು ರೈತರಲ್ಲಿ ಬೇಸರ ಉಂಟುಮಾಡಿದೆ. ಯೋಜನೆಯ ಉದ್ದೇಶ ಸಾಕಾರಗೊಳ್ಳಬೇಕಾದರೆ, ಸಹಾಯವಾಣಿ ಸಮಸ್ಯೆಯನ್ನು ನಿವಾರಿಸಿ, ಅರ್ಹ ರೈತರಿಗೆ ಯೋಜನೆಯ ಲಾಭ ತಲುಪುವಂತೆ ಮಾಡಬೇಕು.