‘ಕಾವೇರಿ- ಹೇಮಾವತಿ- ಲಕ್ಷ್ಮಣತೀರ್ಥ ನದಿಗಳು ಕೂಡುವ ತ್ರಿವೇಣಿ ಸಂಗಮದಲ್ಲಿ ಪ್ರತೀ 12 ವರ್ಷಗಳಿಗೊಮ್ಮೆ
ಸರ್ಕಾರದಿಂದಲೇ ಕುಂಭಮೇಳ ಆಚರಿಸಲು ಶೀಘ್ರ ಆದೇಶ ಹೊರಡಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿರುವುದನ್ನು (ಪ್ರ.ಜಾ., ಅ. 17) ತಿಳಿದು, ನಮ್ಮ ಸಂವಿಧಾನದ ಗುರಿಯೇನು, ನಾವು ಸಾಗುತ್ತಿರುವ ಮಾರ್ಗ ಯಾವುದು ಎಂದೆನಿಸಿ ವಿಷಾದವಾಯಿತು. ನಮ್ಮ ಸಂವಿಧಾನ ಗುರುತಿಸಿರುವ ಮೂಲಭೂತ ಕರ್ತವ್ಯಗಳಲ್ಲಿ ಹೇಳಲಾಗಿರುವ: ‘ವೈಜ್ಞಾನಿಕ ಮನೋಭಾವ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಪ್ರವೃತ್ತಿಯನ್ನು ಅಭಿವೃದ್ಧಿಗೊಳಿಸುವುದು’ ಎಂಬ ಸಂದೇಶಕ್ಕೆ ವಿರುದ್ಧವಾಗಿ ಈಗ ಸಾರ್ವಜನಿಕರ ಕೋಟ್ಯಂತರ ರೂಪಾಯಿ ತೆರಿಗೆಯ ಹಣವನ್ನು ಅನಗತ್ಯವಾಗಿ ವ್ಯಯಿಸಿದ್ದಲ್ಲದೆ ಅದನ್ನು ಆದೇಶದ ಮೂಲಕ ಸ್ಥಿರಗೊಳಿಸುವುದು ಎಷ್ಟರಮಟ್ಟಿಗೆ ಸಮರ್ಥನೀಯ? ಇದು ಉತ್ತರದ ಮರುಳನ್ನು ದಕ್ಷಿಣದಲ್ಲಿ ಜಾರಿಗೊಳಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುವುದಲ್ಲದೆ ಮತ್ತೇನು?