ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ ಹತ್ತಿಕ್ಕುವ ಯತ್ನ ಸಲ್ಲ

Last Updated 2 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಪುರಭವನದ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಸಂಘಟನೆಗಳು ಅನುಮತಿ ಪಡೆಯಲು ಇನ್ನು ಮುಂದೆ ಪೊಲೀಸ್ ಇಲಾಖೆಗೆ ₹ 10 ಲಕ್ಷದವರೆಗೆ ಬಾಂಡ್ ನೀಡಬೇಕು ಎಂದು ವರದಿಯಾಗಿದೆ (ಪ್ರ.ವಾ., ಜ. 31). ಇಲಾಖೆಯ ಈ ಕ್ರಮ ಪ್ರತಿಭಟನೆಯನ್ನೇ ಹತ್ತಿಕ್ಕುವಂತಿದೆ. ₹ 10 ಲಕ್ಷ ಸಣ್ಣ ಮೊತ್ತವೇನಲ್ಲ. ಪ್ರತಿಭಟನೆಗಳಿಂದ ಕೆಲವೊಮ್ಮೆ ಸಾರ್ವಜನಿಕ ಆಸ್ತಿಗೆ ಹಾನಿ ಆಗುವುದು ಸತ್ಯವೇ ಆದರೂ ಬಹುತೇಕ ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಪೊಲೀಸ್‌ ಇಲಾಖೆ ಬಯಸಿದಲ್ಲಿ ಎರಡು ಅಥವಾ ಮೂರು ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಪ್ರತಿಭಟನಕಾರರ ಮೇಲೆ ನಿಗಾ ವಹಿಸಲಿ. ಹೆಚ್ಚಿನ ತೊಂದರೆ ಆದಲ್ಲಿ ಆ ಸಂಘಟನೆಗಳಿಂದ ಹಣ ವಸೂಲಿ ಮಾಡಲಿ ಮತ್ತು ಅವುಗಳಿಗೆ ಮತ್ತೊಮ್ಮೆ ಪ್ರತಿಭಟನೆಗೆ ಅನುಮತಿ ನೀಡದಿರಲಿ. ಅದುಬಿಟ್ಟು, ಬಾಂಡ್‌ನ ಮೂಲಕ ಪ್ರತಿಭಟನೆಗಳನ್ನೇ ಹತ್ತಿಕ್ಕುವ ಇಂತಹ ನಿರ್ಧಾರದಿಂದ ಇಲಾಖೆ ಹಿಂದೆ ಸರಿಯಲಿ.

-ಪತ್ತಂಗಿ ಎಸ್. ಮುರಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT