ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತಿತ್ವದ ಅಂಜಿಕೆ

Last Updated 5 ಮೇ 2019, 18:20 IST
ಅಕ್ಷರ ಗಾತ್ರ

ಇಂಡೊನೇಷ್ಯಾದಲ್ಲಿ ಅವಿಶ್ರಾಂತ ಮತ ಎಣಿಕೆಯಿಂದ 272 ಮಂದಿ ಚುನಾವಣಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ (ಪ್ರ.ವಾ., ಏ. 29).

ಕೆಲಸದ ಒತ್ತಡ ಹಾಗೂ ಮಾನಸಿಕ ವೇದನೆಯಿಂದ ಈ ಅಮೂಲ್ಯ ಜೀವಗಳು ಬಲಿಯಾದ ಸುದ್ದಿ ಓದಿದಾಗ, ಈ ಹಿಂದೆ 1960ರ ದಶಕದಲ್ಲಿ ನಾನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನಲ್ಲಿ ಪಂಚಾಯಿತಿ ಚುನಾವಣೆಗಳ ಮತಪತ್ರಗಳನ್ನು ಎಣಿಸಿದ ಸಂದರ್ಭ ನೆನಪಾಯಿತು.

ಆಗ ಚುನಾವಣಾ ಏಜೆಂಟರ ತಕರಾರಿನಿಂದಾಗಿ, ಮತ್ತೆ ಮತ್ತೆ ಮತ ಪತ್ರಗಳನ್ನು ಎಣಿಸುತ್ತ, ಎರಡು ಹಗಲು, ಎರಡು ರಾತ್ರಿ ತಹಶೀಲ್ದಾರರ ಕಚೇರಿಯಲ್ಲಿಯೇ ಕಳೆದು ನೌಕರಿ ಉಳಿಸಿಕೊಳ್ಳಬೇಕಾದ ಪ್ರಸಂಗ ಒದಗಿತ್ತು. ಜೀವನೋಪಾಯದ ನೌಕರಿಗಾಗಿ ಇಂಡೊನೇಷ್ಯಾದ ಚುನಾವಣಾ ಸಿಬ್ಬಂದಿ ಜೀವವನ್ನೇ ಬಲಿ ಕೊಡಬೇಕಾದುದು ದುರ್ದೈವ.
-ಬಸವರಾಜ ಡಿ. ಕುಡಚಿ,ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT