ಆಗ ಚುನಾವಣಾ ಏಜೆಂಟರ ತಕರಾರಿನಿಂದಾಗಿ, ಮತ್ತೆ ಮತ್ತೆ ಮತ ಪತ್ರಗಳನ್ನು ಎಣಿಸುತ್ತ, ಎರಡು ಹಗಲು, ಎರಡು ರಾತ್ರಿ ತಹಶೀಲ್ದಾರರ ಕಚೇರಿಯಲ್ಲಿಯೇ ಕಳೆದು ನೌಕರಿ ಉಳಿಸಿಕೊಳ್ಳಬೇಕಾದ ಪ್ರಸಂಗ ಒದಗಿತ್ತು. ಜೀವನೋಪಾಯದ ನೌಕರಿಗಾಗಿ ಇಂಡೊನೇಷ್ಯಾದ ಚುನಾವಣಾ ಸಿಬ್ಬಂದಿ ಜೀವವನ್ನೇ ಬಲಿ ಕೊಡಬೇಕಾದುದು ದುರ್ದೈವ.
-ಬಸವರಾಜ ಡಿ. ಕುಡಚಿ,ಬೆಳಗಾವಿ