ಬಿಸಿಲಿನ ತಾಪ ಎಲ್ಲೆಡೆ ಹೆಚ್ಚಾಗಿರುವುದರಿಂದ ಪಶು–ಪಕ್ಷಿಗಳು ಬಳಲುತ್ತಿರುತ್ತವೆ. ಆದ್ದರಿಂದ ಮನೆ ಮುಂದೆ, ತಾರಸಿ ಮೇಲೆ ಪಕ್ಷಿಗಳಿಗೆ ಸಣ್ಣ ಸಣ್ಣ ಪಾತ್ರೆ ಅಥವಾ ಡಬ್ಬದಂತಹವುಗಳಲ್ಲಿ ನೀರು ಇಡಬೇಕು.
ಮಕ್ಕಳಿಗೂ ಇಂತಹ ಅಭ್ಯಾಸ ಮಾಡಿಸಬೇಕು. ಇದರಿಂದ ಅವರಿಗೆ ಪ್ರಾಣಿಪಕ್ಷಿಗಳ ಮೇಲೆ ಪ್ರೀತಿ ಬರುತ್ತದೆ, ಮಾನವೀಯ ಗುಣ ಬೆಳೆಯುತ್ತದೆ. ಮೂಕಪ್ರಾಣಿಗಳು ಅಪಾಯಕ್ಕೆ ಒಳಗಾದಾಗ ಸಹಾಯ ಮಾಡಬೇಕೆಂಬ ಹೃದಯವಂತಿಕೆ ಸಹ ಮೂಡುತ್ತದೆ. -ಎಂ.ಎಸ್.ಉಷಾ ಪ್ರಕಾಶ್, ಮೈಸೂರು