ನಿಸಾರ್ ಅಹಮದ್ ಅವರ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ...’ ಪದ್ಯವನ್ನು ಓದಿದಾಗ ‘ಮನಸ್ಸು ಭಾರವಾಗುತ್ತದೆ’ ಎಂದಿರುವ ಡಾ. ಕೆ.ಎಸ್.ಗಂಗಾಧರ ಅವರ ಮಾತು (ವಾ.ವಾ., ಮೇ 5) ಉಚಿತವಾಗಿಯೇ ಇದೆ. ಆದರೆ, ‘ಕೆಲವರ ತಪ್ಪಿನಿಂದಾಗಿ ಇಡೀ ಸಮುದಾಯವನ್ನು ಅನುಮಾನದ ದೃಷ್ಟಿಯಿಂದ ನೋಡುವ ಪ್ರವೃತ್ತಿಯೇ ಈ ನೋವಿಗೆ ಮೂಲ ಕಾರಣ’ ಎಂದಿರುವುದು ಅಷ್ಟು ಸಮಂಜಸ ಎನಿಸುವುದಿಲ್ಲ.