<p>ನಿಸಾರ್ ಅಹಮದ್ ಅವರ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ...’ ಪದ್ಯವನ್ನು ಓದಿದಾಗ ‘ಮನಸ್ಸು ಭಾರವಾಗುತ್ತದೆ’ ಎಂದಿರುವ ಡಾ. ಕೆ.ಎಸ್.ಗಂಗಾಧರ ಅವರ ಮಾತು (ವಾ.ವಾ., ಮೇ 5) ಉಚಿತವಾಗಿಯೇ ಇದೆ. ಆದರೆ, ‘ಕೆಲವರ ತಪ್ಪಿನಿಂದಾಗಿ ಇಡೀ ಸಮುದಾಯವನ್ನು ಅನುಮಾನದ ದೃಷ್ಟಿಯಿಂದ ನೋಡುವ ಪ್ರವೃತ್ತಿಯೇ ಈ ನೋವಿಗೆ ಮೂಲ ಕಾರಣ’ ಎಂದಿರುವುದು ಅಷ್ಟು ಸಮಂಜಸ ಎನಿಸುವುದಿಲ್ಲ.</p>.<p>ಪದ್ಯದ ಯಾವ ಸಾಲುಗಳಲ್ಲಿಯೂ ಅವರು ಇಡೀ ಸಮುದಾಯವನ್ನು ಕುರಿತು ಬರೆದಿರುವ ಸೂಚನೆ ಕಂಡುಬರುವುದಿಲ್ಲ. ‘ನಿಮ್ಮೊಡನೆ ಕಾಫಿ ಹೀರಿ ಪೇಪರೋದಿ ಹರಟಿ’, ‘ನಿಮ್ಮ ಕುಡಿತ ಕುಣಿತ ಕೂಟಗಳು’, ‘ನನ್ನೆದುರಿನಲ್ಲೇ ತನಿಖೆ ಮಾಡುವ ಕ್ಷಣವನ್ನು’ ಮುಂತಾದ ಸಾಲುಗಳು ಅವರೊಡನಾಡಿದ ಮಂದಿಯಲ್ಲಿ ಕೆಲವರನ್ನು ಮಾತ್ರ ಸೂಚಿಸುತ್ತವೆಯಲ್ಲವೇ?</p>.<p>ಗಂಗಾಧರರ ಆ ಮಾತನ್ನು ಹೀಗೆ ಹೇಳಬಹುದೇನೊ: ಕೆಲವರು ತಮ್ಮ ವರ್ತನೆಗಳಿಂದ ಇಡೀ ಸಮುದಾಯವೇ ತಲೆತಗ್ಗಿಸುವಂತೆ ಮಾಡುತ್ತಾರೆ. ಕವಿಗಾಗಿರುವ ನೋವು ಅಭಿವ್ಯಕ್ತಿಸಿಯೇ ತೀರಬೇಕು ಎಂಬಷ್ಟು ತೀವ್ರವಾಗಿ ಕಾಡಿರಬೇಕು. ನೋವಿಗೆ ಮೂಲವಾದದ್ದು ಕೆಲವರ ಮನಸ್ಸಿನ ಸಂಕುಚಿತತೆ ಇರಬಹುದು.</p>.<p><em><strong>-ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಿಸಾರ್ ಅಹಮದ್ ಅವರ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ...’ ಪದ್ಯವನ್ನು ಓದಿದಾಗ ‘ಮನಸ್ಸು ಭಾರವಾಗುತ್ತದೆ’ ಎಂದಿರುವ ಡಾ. ಕೆ.ಎಸ್.ಗಂಗಾಧರ ಅವರ ಮಾತು (ವಾ.ವಾ., ಮೇ 5) ಉಚಿತವಾಗಿಯೇ ಇದೆ. ಆದರೆ, ‘ಕೆಲವರ ತಪ್ಪಿನಿಂದಾಗಿ ಇಡೀ ಸಮುದಾಯವನ್ನು ಅನುಮಾನದ ದೃಷ್ಟಿಯಿಂದ ನೋಡುವ ಪ್ರವೃತ್ತಿಯೇ ಈ ನೋವಿಗೆ ಮೂಲ ಕಾರಣ’ ಎಂದಿರುವುದು ಅಷ್ಟು ಸಮಂಜಸ ಎನಿಸುವುದಿಲ್ಲ.</p>.<p>ಪದ್ಯದ ಯಾವ ಸಾಲುಗಳಲ್ಲಿಯೂ ಅವರು ಇಡೀ ಸಮುದಾಯವನ್ನು ಕುರಿತು ಬರೆದಿರುವ ಸೂಚನೆ ಕಂಡುಬರುವುದಿಲ್ಲ. ‘ನಿಮ್ಮೊಡನೆ ಕಾಫಿ ಹೀರಿ ಪೇಪರೋದಿ ಹರಟಿ’, ‘ನಿಮ್ಮ ಕುಡಿತ ಕುಣಿತ ಕೂಟಗಳು’, ‘ನನ್ನೆದುರಿನಲ್ಲೇ ತನಿಖೆ ಮಾಡುವ ಕ್ಷಣವನ್ನು’ ಮುಂತಾದ ಸಾಲುಗಳು ಅವರೊಡನಾಡಿದ ಮಂದಿಯಲ್ಲಿ ಕೆಲವರನ್ನು ಮಾತ್ರ ಸೂಚಿಸುತ್ತವೆಯಲ್ಲವೇ?</p>.<p>ಗಂಗಾಧರರ ಆ ಮಾತನ್ನು ಹೀಗೆ ಹೇಳಬಹುದೇನೊ: ಕೆಲವರು ತಮ್ಮ ವರ್ತನೆಗಳಿಂದ ಇಡೀ ಸಮುದಾಯವೇ ತಲೆತಗ್ಗಿಸುವಂತೆ ಮಾಡುತ್ತಾರೆ. ಕವಿಗಾಗಿರುವ ನೋವು ಅಭಿವ್ಯಕ್ತಿಸಿಯೇ ತೀರಬೇಕು ಎಂಬಷ್ಟು ತೀವ್ರವಾಗಿ ಕಾಡಿರಬೇಕು. ನೋವಿಗೆ ಮೂಲವಾದದ್ದು ಕೆಲವರ ಮನಸ್ಸಿನ ಸಂಕುಚಿತತೆ ಇರಬಹುದು.</p>.<p><em><strong>-ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>