ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಗತಕಾಲಕ್ಕೆ ಕೊಂಡೊಯ್ದ ‘ಕೋಲ್ಮಿಂಚು’ಗಳು

Last Updated 13 ಜುಲೈ 2020, 19:45 IST
ಅಕ್ಷರ ಗಾತ್ರ

‘ಕೋವಿಡ್ ಕಾಲದ ಕೋಲ್ಮಿಂಚುಗಳು’ ತಲೆಬರಹದಡಿ ಮಾನವೀಯ ಮತ್ತು ಭಾವನಾತ್ಮಕವಾದ ಎರಡು ವಿಶೇಷ ಬರಹಗಳು (ಪ್ರ.ವಾ., ಜುಲೈ 12) ಹಿಂದಿನ ಜನಜೀವನವನ್ನು ನೆನಪು ಮಾಡಿಕೊಡುವ ಮೂಲಕ ನಮ್ಮ ಸಂಸ್ಕೃತಿಯೆಡೆಗೆ ಮತ್ತೆ ಹೋಗಬೇಕಾದ ಅನಿವಾರ್ಯವನ್ನು ಒತ್ತಿ ಹೇಳಿವೆ. ಈ ಭಾಗದಲ್ಲಿ ಮುಯ್ಯಾಳು ಎನ್ನುವ ಪದ್ಧತಿ ಜಾರಿಯಲ್ಲಿತ್ತು. ಅದೀಗ ಕೂಲಿಯಾಳು ಕೊರತೆಯಿಂದ ಶಿರಸಿಯಲ್ಲಿ ಭತ್ತದ ನಾಟಿ ಸಂದರ್ಭದಲ್ಲಿ ಮತ್ತೆ ಚಾಲ್ತಿಗೆ ಬಂದಿದೆ.

ಐದಾರು ದಶಕಗಳ ಹಿಂದೆ ಶಿಕ್ಷಣಕ್ಕೆ ಮಹತ್ವ ಇಲ್ಲದ ಸಂದರ್ಭದಲ್ಲಿ ಕೂಲಿ ಮಠದ ವ್ಯವಸ್ಥೆ ಇತ್ತು. ಅದೇ ರೀತಿ, ಕಲಬುರ್ಗಿ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವರು ವಾಸವಿರುವ ವಠಾರಕ್ಕೇ ತೆರಳಿ ಪಾಠ ಮಾಡುತ್ತಿರುವುದು ಶ್ಲಾಘನೀಯ. ಬದಲಾದ ಸನ್ನಿವೇಶದಲ್ಲಿ ಗತಕಾಲದ ಇಂತಹ ಕ್ರಮಗಳು ಮರುಜೀವ ಪಡೆದಿರುವುದು ಕೊರೊನಾ ಮಹಿಮೆ.
-ರುದ್ರಮೂರ್ತಿ ಎಂ.ಜೆ.,ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT