‘ಸುಳ್ಳುಗಳ ರಣತಂತ್ರ ಮತ್ತು ಗಣತಂತ್ರ’ ಎಂಬ ನಾರಾಯಣ ಎ. ಅವರ ಲೇಖನ (ಪ್ರ.ವಾ., ಜ. 26) ಸಂದರ್ಭೋಚಿತವಾಗಿದೆ. ಸತ್ಯ ಮತ್ತು ಸುಳ್ಳುಗಳ ನಡುವಿನ ವ್ಯತ್ಯಾಸವನ್ನು ಅರಿಯಲಾಗದಂತಹ ಭ್ರಮಾತ್ಮಕ ಸಮಾಜ ಸೃಷ್ಟಿಯಾಗುತ್ತಿರುವುದು ಆತಂಕಕಾರಿ. ಪುಕ್ಕಲರು ಮಾತ್ರ ತಮ್ಮನ್ನು ಶೂರಾಧಿಶೂರರು ಎಂದು ಬಿಂಬಿಸಿ ಕೊಳ್ಳುತ್ತಾ ಹಿಂಸೆಯನ್ನು ಅವಲಂಬಿಸುತ್ತಾರೆ. ಆಡಳಿತಾತ್ಮಕ ವೈಫಲ್ಯಗಳನ್ನು ಮರೆಸುವ ತಂತ್ರದ ಭಾಗವಾಗಿ ದೇಶಪ್ರೇಮ ಮತ್ತು ದೇಶರಕ್ಷಣೆಯ ಮೊರೆ ಹೋಗುವುದು ಇಂಥವರಿಗೆ ಸಲೀಸು.