ಅತ್ಯಾಚಾರ ಆರೋಪದ ಮೇಲೆ ಸ್ಯಾಂಟ್ರೊ ರವಿಯನ್ನು ಬಂಧಿಸಲಾಗಿದ್ದು, ಈ ಸಂಬಂಧ ಎಡಿಜಿಪಿ ಅಲೋಕ್ ಕುಮಾರ್ ಅವರು ದೇವಾಲಯವೊಂದಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ರವಿಯ ಬಂಧನಕ್ಕಾಗಿ ತಾವು ಹೊತ್ತಿದ್ದ ಹರಕೆ ಫಲಪ್ರದವಾಗಿದ್ದಕ್ಕೆ ಈ ಪೂಜೆ ಎಂದು ಅವರು ಸ್ವತಃ ಕಾರಣ ನೀಡಿದ್ದಾರೆ! ಸ್ಯಾಂಟ್ರೊ ರವಿ ಹಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿಸಿಕೊಟ್ಟಿದ್ದಾರೆ ಎಂಬುದು ಆತನದು ಎನ್ನಲಾದ ಆಡಿಯೊ ಕ್ಲಿಪಿಂಗ್ಗಳಿಂದ ತಿಳಿದುಬರುತ್ತದೆ. ಹೀಗಿದ್ದೂ ಆತನ ಬಂಧನ ಅಷ್ಟೊಂದು ಕ್ಲಿಷ್ಟಕರವಾಗಿತ್ತೇ ಎಂಬ ಅನುಮಾನ ಮೂಡದಿರದು.