ಶಾಲೆಗೆ ಉತ್ತಮ ಫಲಿತಾಂಶ ದೊರಕಿಸಿಕೊಡಲು ಶ್ರಮಿಸುವ ಶಿಕ್ಷಕರ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಇಲ್ಲಿ ಸರ್ಕಾರವು ಖಾಸಗಿ ಶಾಲೆಗಳ ಶುಲ್ಕದ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದರ ಬದಲು, ಆಯಾ ಶಾಲಾ ಸಿಬ್ಬಂದಿಗೆ ಕಾಲಕಾಲಕ್ಕೆ ಸಂಬಳ ಸಿಗುವಂತೆ ಮಾಡಲಿ. ಅವರ ಆರೋಗ್ಯದ ಬಗೆಗೆ ಕಾಳಜಿ ವಹಿಸಲಿ. ಯಾರಾದರೂ ಅಕಾಲಿಕವಾಗಿ ಮರಣ ಹೊಂದಿದರೆ ಅವರ ಮಕ್ಕಳ ಭವಿಷ್ಯದ ಶಿಕ್ಷಣಕ್ಕೆ ನೆರವಾಗುವ ರೀತಿಯಲ್ಲಿ ಮಾನದಂಡ
ಗಳನ್ನು ರೂಪಿಸಿ ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಲಿ. ಆಗ ಬಡಪಾಯಿ ಶಿಕ್ಷಕರನ್ನು ನಂಬಿರುವ ಕುಟುಂಬಗಳಿಗೆ ಆಸರೆಯಾದೀತು. ಅದು ಬಿಟ್ಟು, ಬಹುತೇಕ ಉಳ್ಳವರೇ ತಮ್ಮ ಮಕ್ಕಳನ್ನು ಸೇರಿಸುವ ಶಾಲೆಗಳ ಶುಲ್ಕದ ಬಗ್ಗೆ ಅನಗತ್ಯ ಗುದ್ದಾಟ ಬೇಡ.