ಗದಗ, ಧಾರವಾಡ ಭಾಗಕ್ಕೆ ಮೂಲ ಅಗತ್ಯವಾದ ಕುಡಿಯುವ ನೀರು ಒದಗಿಸುವ ಉದ್ದೇಶಿತ ಕಳಸಾ ಬಂಡೂರಿ ಯೋಜನೆಯನ್ನು ವಿರೋಧಿಸಿ, ನದಿ ತಿರುವಿನಿಂದ ಅರಣ್ಯ ನಾಶ, ಪರಿಸರ ಹಾನಿ, ಜಲಚರಗಳ ನಾಶವಾಗುತ್ತದೆ ಎನ್ನುವ ಗೋವಾ ಸರ್ಕಾರವು ಈಗ ತನ್ನ ರಾಜ್ಯದ ವಿದ್ಯುತ್ ಸರಬರಾಜಿಗೆ ಲಕ್ಷಾಂತರ ಮರಗಳ ಮಾರಣಹೋಮಕ್ಕೆ ಪೀಠಿಕೆ ಹಾಕುತ್ತಿರುವುದನ್ನು ಸಹಿಸಲಾಗದು. ಅರಣ್ಯ ನಾಶಕ್ಕೆ ಕಾರಣವಾಗುವ ಈ ಬಗೆಯ ಯೋಜನೆಗಳಿಗೆ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು.