<p>ಜನದಟ್ಟಣೆಯಿಂದ, ಲಕ್ಷಾಂತರ ವಾಹನಗಳು ಉಗುಳುವ ಹೊಗೆಯಿಂದ, ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯದಿಂದ ಮತ್ತು ಕಟ್ಟಡ ಉದ್ದಿಮೆಯೆಂಬ ಬ್ರಹ್ಮರಾಕ್ಷಸ ಸ್ವರೂಪದ ಬೆಳವಣಿಗೆಗಳಿಂದ ಉದ್ಯಾನನಗರಿ ಬೆಂಗಳೂರು ಬವಣೆಪಡುತ್ತಿದೆ. ಒಂದು ಪ್ರದೇಶದ ಪರಿಸರ ಸುಸ್ಥಿರತೆಯನ್ನು ಮಾಪನ ಮಾಡಲು ಪರಿಸರ ವಿಜ್ಞಾನದಲ್ಲಿ ‘ಧಾರಣಾ ಸಾಮರ್ಥ್ಯ’ ಎಂಬ ಮಾನದಂಡವನ್ನು ಬಳಸಲಾಗುತ್ತದೆ. ಆ ಧಾರಣಾ ಸಾಮರ್ಥ್ಯವನ್ನು ಈಗಾಗಲೇ ಮೀರಿ ಬೆಂಗಳೂರು ಬೆಳೆಯುತ್ತಿದೆ. ಇದನ್ನು ತಡೆದು, ಬೆಂಗಳೂರೇ ಕರ್ನಾಟಕವಲ್ಲ ಎಂಬುದನ್ನು ಅರಿತು, ಕೋಲಾರ, ತುಮಕೂರು, ಮಂಡ್ಯದಂತಹ ಅಕ್ಕಪಕ್ಕದ ನಗರಗಳನ್ನು ಬೆಳೆಸಲು ಸರ್ಕಾರ ಆದ್ಯತೆ ನೀಡಬೇಕಾಗಿದೆ. ಆದರೆ ಅದರ ಬದಲು, ರಾಜಧಾನಿಯನ್ನೇ ಬೆಳೆಸಲು ಮುಂದಾಗಿರುವುದು ದುರ್ದೈವ.</p>.<p>ಪ್ರಮುಖ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ, ಜನದಟ್ಟಣೆಯ ಆನಂದರಾವ್ ವೃತ್ತದ ಬಳಿ ₹ 1,250 ಕೋಟಿ ಅಂದಾಜು ವೆಚ್ಚದಲ್ಲಿ 50 ಮಹಡಿಗಳ ಅವಳಿ ಗೋಪುರ ಕಟ್ಟಡ ನಿರ್ಮಿಸುವ ಯೋಜನೆಯು ಬೆಂಗಳೂರಿನ ಪರಿಸರಕ್ಕೆ, ಅದರ ಸುಸ್ಥಿರ ಬೆಳವಣಿಗೆಗೆ ಹೊಡೆತ ನೀಡುತ್ತದೆ. ಈ ಬಗ್ಗೆ ಸರ್ಕಾರವು ವಿವೇಕದಿಂದ ಮರುಚಿಂತಿಸಬೇಕು.</p>.<p><em><strong>-ಟಿ.ಆರ್.ಚಂದ್ರಶೇಖರ, ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜನದಟ್ಟಣೆಯಿಂದ, ಲಕ್ಷಾಂತರ ವಾಹನಗಳು ಉಗುಳುವ ಹೊಗೆಯಿಂದ, ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯದಿಂದ ಮತ್ತು ಕಟ್ಟಡ ಉದ್ದಿಮೆಯೆಂಬ ಬ್ರಹ್ಮರಾಕ್ಷಸ ಸ್ವರೂಪದ ಬೆಳವಣಿಗೆಗಳಿಂದ ಉದ್ಯಾನನಗರಿ ಬೆಂಗಳೂರು ಬವಣೆಪಡುತ್ತಿದೆ. ಒಂದು ಪ್ರದೇಶದ ಪರಿಸರ ಸುಸ್ಥಿರತೆಯನ್ನು ಮಾಪನ ಮಾಡಲು ಪರಿಸರ ವಿಜ್ಞಾನದಲ್ಲಿ ‘ಧಾರಣಾ ಸಾಮರ್ಥ್ಯ’ ಎಂಬ ಮಾನದಂಡವನ್ನು ಬಳಸಲಾಗುತ್ತದೆ. ಆ ಧಾರಣಾ ಸಾಮರ್ಥ್ಯವನ್ನು ಈಗಾಗಲೇ ಮೀರಿ ಬೆಂಗಳೂರು ಬೆಳೆಯುತ್ತಿದೆ. ಇದನ್ನು ತಡೆದು, ಬೆಂಗಳೂರೇ ಕರ್ನಾಟಕವಲ್ಲ ಎಂಬುದನ್ನು ಅರಿತು, ಕೋಲಾರ, ತುಮಕೂರು, ಮಂಡ್ಯದಂತಹ ಅಕ್ಕಪಕ್ಕದ ನಗರಗಳನ್ನು ಬೆಳೆಸಲು ಸರ್ಕಾರ ಆದ್ಯತೆ ನೀಡಬೇಕಾಗಿದೆ. ಆದರೆ ಅದರ ಬದಲು, ರಾಜಧಾನಿಯನ್ನೇ ಬೆಳೆಸಲು ಮುಂದಾಗಿರುವುದು ದುರ್ದೈವ.</p>.<p>ಪ್ರಮುಖ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ, ಜನದಟ್ಟಣೆಯ ಆನಂದರಾವ್ ವೃತ್ತದ ಬಳಿ ₹ 1,250 ಕೋಟಿ ಅಂದಾಜು ವೆಚ್ಚದಲ್ಲಿ 50 ಮಹಡಿಗಳ ಅವಳಿ ಗೋಪುರ ಕಟ್ಟಡ ನಿರ್ಮಿಸುವ ಯೋಜನೆಯು ಬೆಂಗಳೂರಿನ ಪರಿಸರಕ್ಕೆ, ಅದರ ಸುಸ್ಥಿರ ಬೆಳವಣಿಗೆಗೆ ಹೊಡೆತ ನೀಡುತ್ತದೆ. ಈ ಬಗ್ಗೆ ಸರ್ಕಾರವು ವಿವೇಕದಿಂದ ಮರುಚಿಂತಿಸಬೇಕು.</p>.<p><em><strong>-ಟಿ.ಆರ್.ಚಂದ್ರಶೇಖರ, ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>