<p>ಕಾರ್ಜುವಳ್ಳಿ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವರದಿ ಪ್ರಕಟವಾಗಿದೆ (ಪ್ರ.ವಾ., ನ. 26). ಸಮಾಜ ತಪ್ಪು ಹಾದಿಯಲ್ಲಿ ನಡೆದಾಗ ಅಥವಾ ಗೊಂದಲದಲ್ಲಿ ಸಿಲುಕಿಕೊಂಡಾಗ, ಒಳ್ಳೆಯ ವಿಚಾರಗಳನ್ನು ತಿಳಿಸಿ ಸಮಾಜವನ್ನು ಸರಿದಾರಿಗೆ ತರಬೇಕಾದದ್ದು ಸ್ವಾಮೀಜಿಗಳ ಆದ್ಯ ಕರ್ತವ್ಯ.</p>.<p>ಆತ್ಮಹತ್ಯೆ ಮಹಾಪಾಪ ಎಂದು ಬೋಧಿಸಬೇಕಾದ ಸ್ವಾಮಿಗಳೇ ಸ್ವತಃ ಗಲಿಬಿಲಿಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುವವರು ಯಾರು? ಸನ್ಮಾರ್ಗ ಯಾವುದು ಎಂದು ತಿಳಿಸಬೇಕಾದ ಅನೇಕ ಮಾಧ್ಯಮಗಳು ಅಂತಹ ಕೆಲಸವನ್ನು ಬಹುತೇಕ ನಿಲ್ಲಿಸಿವೆ. ಇರುವುದರಲ್ಲಿ ಪುರಾಣ ಪ್ರವಚನ, ಸ್ವಾಮಿಗಳ ಉಪನ್ಯಾಸಗಳು ಕೊಂಚಮಟ್ಟಿಗೆ ಆ ಕೊರತೆಯನ್ನು ನೀಗುತ್ತಿವೆ. ಈಗ ಅದನ್ನೂ ಕಳೆದುಕೊಂಡರೆ ನೀತಿ ಹೇಳುವವರು ಯಾರು? ಸ್ವಾಮಿಗಳೇ ಆತ್ಮಹತ್ಯೆಗೆ ಶರಣಾಗುವುದು ಸಮಾಜದ ದುರಂತ ಮತ್ತು ದೌರ್ಭಾಗ್ಯ.<br /><em><strong>-ಪತ್ತಂಗಿ ಎಸ್. ಮುರಳಿ,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರ್ಜುವಳ್ಳಿ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವರದಿ ಪ್ರಕಟವಾಗಿದೆ (ಪ್ರ.ವಾ., ನ. 26). ಸಮಾಜ ತಪ್ಪು ಹಾದಿಯಲ್ಲಿ ನಡೆದಾಗ ಅಥವಾ ಗೊಂದಲದಲ್ಲಿ ಸಿಲುಕಿಕೊಂಡಾಗ, ಒಳ್ಳೆಯ ವಿಚಾರಗಳನ್ನು ತಿಳಿಸಿ ಸಮಾಜವನ್ನು ಸರಿದಾರಿಗೆ ತರಬೇಕಾದದ್ದು ಸ್ವಾಮೀಜಿಗಳ ಆದ್ಯ ಕರ್ತವ್ಯ.</p>.<p>ಆತ್ಮಹತ್ಯೆ ಮಹಾಪಾಪ ಎಂದು ಬೋಧಿಸಬೇಕಾದ ಸ್ವಾಮಿಗಳೇ ಸ್ವತಃ ಗಲಿಬಿಲಿಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುವವರು ಯಾರು? ಸನ್ಮಾರ್ಗ ಯಾವುದು ಎಂದು ತಿಳಿಸಬೇಕಾದ ಅನೇಕ ಮಾಧ್ಯಮಗಳು ಅಂತಹ ಕೆಲಸವನ್ನು ಬಹುತೇಕ ನಿಲ್ಲಿಸಿವೆ. ಇರುವುದರಲ್ಲಿ ಪುರಾಣ ಪ್ರವಚನ, ಸ್ವಾಮಿಗಳ ಉಪನ್ಯಾಸಗಳು ಕೊಂಚಮಟ್ಟಿಗೆ ಆ ಕೊರತೆಯನ್ನು ನೀಗುತ್ತಿವೆ. ಈಗ ಅದನ್ನೂ ಕಳೆದುಕೊಂಡರೆ ನೀತಿ ಹೇಳುವವರು ಯಾರು? ಸ್ವಾಮಿಗಳೇ ಆತ್ಮಹತ್ಯೆಗೆ ಶರಣಾಗುವುದು ಸಮಾಜದ ದುರಂತ ಮತ್ತು ದೌರ್ಭಾಗ್ಯ.<br /><em><strong>-ಪತ್ತಂಗಿ ಎಸ್. ಮುರಳಿ,ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>