ಆತ್ಮಹತ್ಯೆ ಮಹಾಪಾಪ ಎಂದು ಬೋಧಿಸಬೇಕಾದ ಸ್ವಾಮಿಗಳೇ ಸ್ವತಃ ಗಲಿಬಿಲಿಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುವವರು ಯಾರು? ಸನ್ಮಾರ್ಗ ಯಾವುದು ಎಂದು ತಿಳಿಸಬೇಕಾದ ಅನೇಕ ಮಾಧ್ಯಮಗಳು ಅಂತಹ ಕೆಲಸವನ್ನು ಬಹುತೇಕ ನಿಲ್ಲಿಸಿವೆ. ಇರುವುದರಲ್ಲಿ ಪುರಾಣ ಪ್ರವಚನ, ಸ್ವಾಮಿಗಳ ಉಪನ್ಯಾಸಗಳು ಕೊಂಚಮಟ್ಟಿಗೆ ಆ ಕೊರತೆಯನ್ನು ನೀಗುತ್ತಿವೆ. ಈಗ ಅದನ್ನೂ ಕಳೆದುಕೊಂಡರೆ ನೀತಿ ಹೇಳುವವರು ಯಾರು? ಸ್ವಾಮಿಗಳೇ ಆತ್ಮಹತ್ಯೆಗೆ ಶರಣಾಗುವುದು ಸಮಾಜದ ದುರಂತ ಮತ್ತು ದೌರ್ಭಾಗ್ಯ.
-ಪತ್ತಂಗಿ ಎಸ್. ಮುರಳಿ,ಬೆಂಗಳೂರು