<p>ಹದಿನೈದು ವರ್ಷಗಳ ಹಿಂದಿನ ಮೈತ್ರಿ ಸರ್ಕಾರದಲ್ಲಿ ಹಾಲಿ ಮುಖ್ಯಮಂತ್ರಿ ಸೇರಿದಂತೆ ಅನೇಕ ಮುಖಂಡರು, ಮಠಾಧೀಶರನ್ನು ಬೀದಿಗೆ ಕರೆತಂದು ಪ್ರತಿಭಟನೆ ಮಾಡಿಸಿದ್ದರು. ಆಗಿನ ಅಧಿಕಾರದ ಏಣಿಗೆ ಕಾವಿಯನ್ನು<br />ಸಂದರ್ಭೋಚಿತವಾಗಿ ಬಳಸಿಕೊಂಡವರು, ತಮ್ಮ ಬೆನ್ನಿಗೆ ನಿಂತವರನ್ನು ಸಂತೈಸಲು ಭರಪೂರ ದೇಣಿಗೆ ನೀಡಿದ್ದು ಸಾರ್ವಜನಿಕ ಸತ್ಯ. ಅಂದಿನಿಂದ ಬಟ್ಟೆ ಹಾವನ್ನು ತೋರಿಸಿ ಒತ್ತಾಯಿಸುವ ಆಟವನ್ನು ಮಂತ್ರಿಮಹೋದಯರು<br />ಅನುಕರಿಸಿದ್ದರು. ಆದರೆ ಅದೇ ಹಾವು ಮುಂದೊಮ್ಮೆ ಕಚ್ಚುವಂತಹ ಹಲ್ಲುಗಳನ್ನು ಬೆಳೆಸಿಕೊಳ್ಳುತ್ತದೆ ಎಂದು ನಂಬಿರಲಿಲ್ಲ.</p>.<p>ಅಧಿಕಾರದ ಆಸುಪಾಸಿನಲ್ಲೇ ಇರುವ ಮುಖಂಡರು ತಮ್ಮ ಸರ್ಕಾರದ ವಿರುದ್ಧವೇ ಪ್ರತಿಭಟಿಸುತ್ತಿದ್ದಾರೆ. ಮುಂದುವರಿದ ಹಾವಿನಾಟ, ಅಧಿಕಾರಕ್ಕಾಗಿನ ಹಾವು-ಏಣಿ ಆಟವಾಗಿರುವುದು ಸ್ಪಷ್ಟ. ಇನ್ನಾದರೂ ರಾಜಕೀಯ ನಾಯಕರು ಧರ್ಮ, ಜಾತೀಯತೆಯಿಂದ ಕೊಂಚ ದೂರ ಉಳಿದರೆ ಅವರಿಗೇ ಒಳ್ಳೇಯದಲ್ಲವೆ? ರಾಜಕೀಯವು ಮಠದ ಹೊರಗಿದ್ದರೆ ಒಳ್ಳೆಯದು. ಎರಡೂ ಅದಲು ಬದಲಾದರೆ ನಂತರದ ಪೀಕಲಾಟದಲ್ಲಿ ಸೂತ್ರಧಾರರೇ<br />ಪಾತ್ರಧಾರಿಗಳಾಗಿ ಬಿಡುತ್ತಾರೆ.</p>.<p>ಶಾಂತರಾಜು ಎಸ್. ಮಳವಳ್ಳಿ, <span class="Designate">ಬೆಂಗಳೂರು</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹದಿನೈದು ವರ್ಷಗಳ ಹಿಂದಿನ ಮೈತ್ರಿ ಸರ್ಕಾರದಲ್ಲಿ ಹಾಲಿ ಮುಖ್ಯಮಂತ್ರಿ ಸೇರಿದಂತೆ ಅನೇಕ ಮುಖಂಡರು, ಮಠಾಧೀಶರನ್ನು ಬೀದಿಗೆ ಕರೆತಂದು ಪ್ರತಿಭಟನೆ ಮಾಡಿಸಿದ್ದರು. ಆಗಿನ ಅಧಿಕಾರದ ಏಣಿಗೆ ಕಾವಿಯನ್ನು<br />ಸಂದರ್ಭೋಚಿತವಾಗಿ ಬಳಸಿಕೊಂಡವರು, ತಮ್ಮ ಬೆನ್ನಿಗೆ ನಿಂತವರನ್ನು ಸಂತೈಸಲು ಭರಪೂರ ದೇಣಿಗೆ ನೀಡಿದ್ದು ಸಾರ್ವಜನಿಕ ಸತ್ಯ. ಅಂದಿನಿಂದ ಬಟ್ಟೆ ಹಾವನ್ನು ತೋರಿಸಿ ಒತ್ತಾಯಿಸುವ ಆಟವನ್ನು ಮಂತ್ರಿಮಹೋದಯರು<br />ಅನುಕರಿಸಿದ್ದರು. ಆದರೆ ಅದೇ ಹಾವು ಮುಂದೊಮ್ಮೆ ಕಚ್ಚುವಂತಹ ಹಲ್ಲುಗಳನ್ನು ಬೆಳೆಸಿಕೊಳ್ಳುತ್ತದೆ ಎಂದು ನಂಬಿರಲಿಲ್ಲ.</p>.<p>ಅಧಿಕಾರದ ಆಸುಪಾಸಿನಲ್ಲೇ ಇರುವ ಮುಖಂಡರು ತಮ್ಮ ಸರ್ಕಾರದ ವಿರುದ್ಧವೇ ಪ್ರತಿಭಟಿಸುತ್ತಿದ್ದಾರೆ. ಮುಂದುವರಿದ ಹಾವಿನಾಟ, ಅಧಿಕಾರಕ್ಕಾಗಿನ ಹಾವು-ಏಣಿ ಆಟವಾಗಿರುವುದು ಸ್ಪಷ್ಟ. ಇನ್ನಾದರೂ ರಾಜಕೀಯ ನಾಯಕರು ಧರ್ಮ, ಜಾತೀಯತೆಯಿಂದ ಕೊಂಚ ದೂರ ಉಳಿದರೆ ಅವರಿಗೇ ಒಳ್ಳೇಯದಲ್ಲವೆ? ರಾಜಕೀಯವು ಮಠದ ಹೊರಗಿದ್ದರೆ ಒಳ್ಳೆಯದು. ಎರಡೂ ಅದಲು ಬದಲಾದರೆ ನಂತರದ ಪೀಕಲಾಟದಲ್ಲಿ ಸೂತ್ರಧಾರರೇ<br />ಪಾತ್ರಧಾರಿಗಳಾಗಿ ಬಿಡುತ್ತಾರೆ.</p>.<p>ಶಾಂತರಾಜು ಎಸ್. ಮಳವಳ್ಳಿ, <span class="Designate">ಬೆಂಗಳೂರು</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>