ಹದಿನೈದು ವರ್ಷಗಳ ಹಿಂದಿನ ಮೈತ್ರಿ ಸರ್ಕಾರದಲ್ಲಿ ಹಾಲಿ ಮುಖ್ಯಮಂತ್ರಿ ಸೇರಿದಂತೆ ಅನೇಕ ಮುಖಂಡರು, ಮಠಾಧೀಶರನ್ನು ಬೀದಿಗೆ ಕರೆತಂದು ಪ್ರತಿಭಟನೆ ಮಾಡಿಸಿದ್ದರು. ಆಗಿನ ಅಧಿಕಾರದ ಏಣಿಗೆ ಕಾವಿಯನ್ನು
ಸಂದರ್ಭೋಚಿತವಾಗಿ ಬಳಸಿಕೊಂಡವರು, ತಮ್ಮ ಬೆನ್ನಿಗೆ ನಿಂತವರನ್ನು ಸಂತೈಸಲು ಭರಪೂರ ದೇಣಿಗೆ ನೀಡಿದ್ದು ಸಾರ್ವಜನಿಕ ಸತ್ಯ. ಅಂದಿನಿಂದ ಬಟ್ಟೆ ಹಾವನ್ನು ತೋರಿಸಿ ಒತ್ತಾಯಿಸುವ ಆಟವನ್ನು ಮಂತ್ರಿಮಹೋದಯರು
ಅನುಕರಿಸಿದ್ದರು. ಆದರೆ ಅದೇ ಹಾವು ಮುಂದೊಮ್ಮೆ ಕಚ್ಚುವಂತಹ ಹಲ್ಲುಗಳನ್ನು ಬೆಳೆಸಿಕೊಳ್ಳುತ್ತದೆ ಎಂದು ನಂಬಿರಲಿಲ್ಲ.