ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಸುಶಿಕ್ಷಿತರ ಮೌಢ್ಯ; ಬೇಕು ವಿಶೇಷ ಅಧ್ಯಯನ!

Last Updated 20 ಆಗಸ್ಟ್ 2020, 15:37 IST
ಅಕ್ಷರ ಗಾತ್ರ

ಶಿಕ್ಷಣ ಪಡೆಯುವವರ ಸಂಖ್ಯೆ ಮತ್ತು ವಿಜ್ಞಾನದ ಬೆಳವಣಿಗೆ ಹೆಚ್ಚಾದಂತೆ ಮೌಢ್ಯ ಹಾಗೂ ಮೌಢ್ಯ ಪ್ರಚಾರಕರು ಕೂಡಹೆಚ್ಚಾಗುತ್ತಿದ್ದಾರೆ ಎಂದು ಪ್ರೊ. ಅಬ್ದುಲ್ ರೆಹಮಾನ್ ಪಾಷ ತಮ್ಮ ಲೇಖನದಲ್ಲಿ (ಸಂಗತ, ಆ. 20) ಉಲ್ಲೇಖಿಸಿದ್ದಾರೆ.

ಸುಶಿಕ್ಷಿತರ ಮೌಢ್ಯ ಆಚರಣೆ ಕುರಿತು ವಿಶೇಷವಾದ ಅಧ್ಯಯನಗಳೇ ನಡೆಯಬೇಕೇನೊ. ಇಂಥ ಆಚರಣೆ ನಡೆಸುವವರಲ್ಲಿ ವಿಜ್ಞಾನವನ್ನು ಬೋಧಿಸುವ, ಸಂಶೋಧಿಸುವ ಶಿಕ್ಷಕರು, ಉಪನ್ಯಾಸಕರು, ಪ್ರೊಫೆಸರ್‌ಗಳು ಮತ್ತು ವಿಜ್ಞಾನಿಗಳು ಕೂಡ ಇದ್ದಾರೆ. ಇಂತಹವರನ್ನು ಕುರಿತೇ ಕುವೆಂಪು ಅವರು ‘ವಿಜ್ಞಾನದ ಭಾರವನ್ನು ಹೊತ್ತು ತಿರುಗುವ ಹೇಸರಗತ್ತೆಗಳು’ ಎಂದು ಕರೆದಿರಬಹುದು.

ರಾಜಕಾರಣಿಗಳಿಗಾದರೆ ಮೌಢ್ಯಾಚರಣೆಯಿಂದ ಜಾತಿ-ಸಮುದಾಯಗಳ ಮತಬೇಟೆಯ ಲಾಭ ಸಿಗಬಹುದೇನೊ. ಆದರೆ ವಿಜ್ಞಾನ ಆಧಾರಿತ ಈ ಕೆಲವು ವೃತ್ತಿನಿರತರಿಗೆ ಆತ್ಮವಂಚನೆಯ ವಿನಾ ಬೇರೇನು ಸಿಗುತ್ತದೋ ಅರ್ಥವಾಗುವುದಿಲ್ಲ. ಆದರೆ ಇಂಥ ಬೋಧಕರು, ಸಂಶೋಧಕರು ತಮ್ಮ ಬೋಧನೆ ಮತ್ತು ಸಂಶೋಧನೆಗಳಲ್ಲಿ ಒಂದನ್ನು ಪ್ರತಿಪಾದಿಸಿ, ನಡೆ-ನುಡಿಯಲ್ಲಿ ಮತ್ತೊಂದನ್ನು ಪ್ರತಿಪಾದಿಸುತ್ತ ಜನಸಾಮಾನ್ಯರನ್ನು ದ್ವಂದ್ವಕ್ಕೆ ಸಿಲುಕಿಸುವುದು ಸರಿಯೇ?
-ಡಿ.ಎಂ.ನದಾಫ್,ಅಫಜಲಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT