ರಾಜಕಾರಣಿಗಳಿಗಾದರೆ ಮೌಢ್ಯಾಚರಣೆಯಿಂದ ಜಾತಿ-ಸಮುದಾಯಗಳ ಮತಬೇಟೆಯ ಲಾಭ ಸಿಗಬಹುದೇನೊ. ಆದರೆ ವಿಜ್ಞಾನ ಆಧಾರಿತ ಈ ಕೆಲವು ವೃತ್ತಿನಿರತರಿಗೆ ಆತ್ಮವಂಚನೆಯ ವಿನಾ ಬೇರೇನು ಸಿಗುತ್ತದೋ ಅರ್ಥವಾಗುವುದಿಲ್ಲ. ಆದರೆ ಇಂಥ ಬೋಧಕರು, ಸಂಶೋಧಕರು ತಮ್ಮ ಬೋಧನೆ ಮತ್ತು ಸಂಶೋಧನೆಗಳಲ್ಲಿ ಒಂದನ್ನು ಪ್ರತಿಪಾದಿಸಿ, ನಡೆ-ನುಡಿಯಲ್ಲಿ ಮತ್ತೊಂದನ್ನು ಪ್ರತಿಪಾದಿಸುತ್ತ ಜನಸಾಮಾನ್ಯರನ್ನು ದ್ವಂದ್ವಕ್ಕೆ ಸಿಲುಕಿಸುವುದು ಸರಿಯೇ?
-ಡಿ.ಎಂ.ನದಾಫ್,ಅಫಜಲಪುರ