ಮಂಗಳವಾರ, ಮಾರ್ಚ್ 28, 2023
31 °C

ನಿಸರ್ಗದ ಆರಾಧನೆಗೆ ಬೇಕಿರುವುದು ಕೃತಕ ಪರಿಸರವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಗದ ಬಳಿ ಪಂಚತಾರಾ ಹೋಟೆಲ್‍ಗೆ ಅರಣ್ಯ ಭೂಮಿಯನ್ನು ಪರಭಾರೆ ಮಾಡುವ ನಿರ್ಧಾರ ಆಘಾತ ಕಾರಿಯಾದುದು. ಶಿವಮೊಗ್ಗದಿಂದ ಕೇವಲ ನೂರು ಕಿಲೊ ಮೀಟರ್ ದೂರದಲ್ಲಿರುವ ಜಲಪಾತದ ಹತ್ತಿರ ಇಂತಹ ಕಟ್ಟಡಗಳು ಅವಶ್ಯವೇ? ಪ್ರವಾಸಿಗರು ಉಳಿದುಕೊಳ್ಳಲು ಶಿವಮೊಗ್ಗ ಅಥವಾ ಕೇವಲ 30 ಕಿಲೊ ಮೀಟರ್ ದೂರದಲ್ಲಿರುವ ಸಾಗರದಲ್ಲಿ ಎಂತಹ ಪಂಚತಾರಾ ಹೋಟೆಲ್‍ಗಳನ್ನು ಬೇಕಾದರೂ ನಿರ್ಮಿಸಬಹುದಲ್ಲವೇ?

ಪಾರಂಪರಿಕ ಪ್ರಕೃತಿ ತಾಣಗಳನ್ನು ಮೂಲ ರೂಪದಲ್ಲಿ ಉಳಿಸಿಕೊಳ್ಳುವುದು ಆದ್ಯತೆಯಾಗಬೇಕೇ ವಿನಾ ಅಲ್ಲಿರುವ ಅರಣ್ಯ ನಾಶಪಡಿಸಿ ಕೃತಕ ಪರಿಕರಗಳನ್ನು ನಿರ್ಮಿಸುವುದಲ್ಲ. ಹಾಗೆಯೇ ರೋಪ್ ವೇ, ಜಿಪ್‌ ವೇಗಳ ಅವಶ್ಯಕತೆಯೂ ಇಲ್ಲ. ಅಲ್ಲಿನ ರುದ್ರ ರಮಣೀಯ ಸೌಂದರ್ಯವನ್ನು ಸವಿಯಲು ಸಂವೇದನಾಶೀಲ ಮನಸ್ಸು ಬೇಕೇ ವಿನಾ ಕೃತಕ ಪರಿಕರಗಳಲ್ಲ. ಕರ್ನಾಟಕದ ಹೆಮ್ಮೆಯಾದ ಜೋಗ ಜಲಪಾತದ ಸೌಂದರ್ಯವನ್ನು ಉಳಿಸಲು ಪರಿಸರ ಮಾರಕ ಅಭಿವೃದ್ಧಿಯನ್ನು ಮೊದಲು ತಡೆಯಬೇಕಾಗಿದೆ.ಶ್ರೀ

– ಡಾ. ಎಸ್.ಶಿಶುಪಾಲ, ದಾವಣಗೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು