ಮಂಗಳವಾರ, ಮಾರ್ಚ್ 28, 2023
23 °C

ಕ್ರೀಡಾಪಟುಗಳ ನಡುವೆ ತಾರತಮ್ಯವೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಮತ್ತು ಇತರ ಕ್ರೀಡಾಪಟುಗಳು ಬೆಳ್ಳಿ, ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಾಗ ದೇಶದಾದ್ಯಂತ ಸಂಭ್ರಮ ವ್ಯಕ್ತವಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಯ ಮಹಾಪೂರವೇ ಹರಿದುಬಂತು. ಆದರೆ, ಅದೇ ಪ್ಯಾರಾ ಒಲಿಂಪಿಕ್ಸ್‌ನ ಜಾವಲಿನ್‌ ಎಸೆತದಲ್ಲಿ ಸುಮಿತ್ ಅಂಟಿಲ್ ಹಾಗೂ ಏರ್ ರೈಫಲ್‌ನಲ್ಲಿ ಅವನಿ ಲೇಖರ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಾಗ ಸಾಮಾಜಿಕ ಜಾಲತಾಣಗಳಲ್ಲಿ ಮೊದಲಿನ ಸಂಭ್ರಮ ಕಂಡುಬರಲಿಲ್ಲ, ಶುಭಾಶಯಗಳ ಮಹಾಪೂರವೂ ಹರಿದುಬರಲಿಲ್ಲ. ಇನ್ನಾದರೂ ನಮ್ಮ ಮನಃಸ್ಥಿತಿಯನ್ನು ಬದಲಿಸಿಕೊಂಡು, ಎಲ್ಲರನ್ನೂ ಸಮಾನವಾಗಿ ಕಾಣೋಣ. ಆಗ ಮಾತ್ರ ಅಂಗವಿಕಲ ಕ್ರೀಡಾಪಟುಗಳಿಗೆ ಚೈತನ್ಯ ತುಂಬಲು ಸಾಧ್ಯ.

–ನಿಂಗಪ್ಪ ಮಾಳಶೆಟ್ಟಿ, ಹೊಸಪೇಟೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು