<p>ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಪ್ರದರ್ಶಿತವಾದ ಯು.ಆರ್. ಅನಂತಮೂರ್ತಿ ಅವರ ‘ಸಂಸ್ಕಾರ’ ಕೃತಿಯಾಧಾರಿತ, ಮೈಸೂರು ರಂಗಾಯಣ ಪ್ರಸ್ತುತಿಯ ಅದೇ ಹೆಸರಿನ ನಾಟಕ ಪ್ರದರ್ಶನ ವೀಕ್ಷಿಸಿದ ನಂತರ ಅನ್ನಿಸಿದ್ದಿಷ್ಟು.<br /> <br /> ಕಚಾಕಚ್ ಭರ್ತಿಯಾಗಿದ್ದ ರಂಗಮಂದಿರ ರೋಮಾಂಚನದ ಅನುಭವ ನೀಡಿತ್ತು. ಆದರೆ ಪ್ರದರ್ಶನ ಮುಂದುವರಿದಂತೆ ಪ್ರೇಕ್ಷಕರ ವರ್ತನೆ ಅಸಹ್ಯ ತರಿಸುವಂತಿತ್ತು. ‘ಶವಸಂಸ್ಕಾರ’ದಂತಹ ಗಂಭೀರ ‘ಪ್ರಶ್ನೆ’ ಉಳ್ಳ ಮೂಲಕತೆಯ ಗಾಂಭೀರ್ಯ ಈ ಪ್ರದರ್ಶನದಲ್ಲಿ ಎಲ್ಲೂ ಕಂಡು ಬರಲಿಲ್ಲ. ಯಾರನ್ನಾದರೂ, ಏನನ್ನಾದರೂ ಹೀಯಾಳಿಸಿದಾಗ ಶಿಳ್ಳೆ, ಕೇಕೆ, ಚಪ್ಪಾಳೆಗಳ ಸುರಿಮಳೆಯಾಗುತ್ತಿತ್ತು. ಒಂದು ಹಂತದಲ್ಲಿ ಇದು ‘ನಗೆ ನಾಟಕವೇ?’ ಎಂಬ ಅನುಮಾನ ಬರುವಷ್ಟು ಕೆಟ್ಟ ವಾತಾವರಣವಿತ್ತು.<br /> <br /> <strong>ಪ್ರದರ್ಶನದ ನಂತರ ಉದ್ಭವಿಸಿದ ಪ್ರಶ್ನೆಗಳಿವು.</strong><br /> * ಚಂದ್ರಿ ಕಾಮದ ಸಂಕೇತವಾದಂತೆ ದಾಸಾಚಾರ್ಯ ಹಸಿವಿನ ಸಂಕೇತ. ಆದರೆ ಇಲ್ಲಿ ದಾಸಾಚಾರ್ಯ ವಿದೂಷಕನಂತೇಕೆ ಬಿಂಬಿತವಾಗಿದ್ದಾನೆ?<br /> <br /> * ಶ್ರೀಮಠದ ಆಚಾರ್ಯರು, ಇತ್ತೀಚಿನ ವಿಕೃತ ಸ್ವಾಮಿಗಳಂತೆ ಪರಿಹಾರ ಕೇಳಿ ಬಂದವರಿಗೆ ಮಲಗಿಕೊಂಡೇ ಕಾಲಿನಿಂದ ಉತ್ತರಿಸುವ ದೃಶ್ಯ ಲೇವಡಿಯ ಪರಮಾವಧಿ ಅಲ್ಲವೇ?<br /> <br /> * ಅಗತ್ಯವಿಲ್ಲದಿದ್ದರೂ ಬಹುಸಂಖ್ಯೆಯಲ್ಲಿ ವಿಧವೆಯರನ್ನು ತೆರೆ ಮೇಲೆ ತಂದ ಉದ್ದಿಶ್ಯವಾದರೂ ಏನು?<br /> <br /> * ವಚನದ ಇಂಪು ಹಾಗೂ ಸಂದೇಶ ಹಾಡಿದ ಅಬ್ಬರದಲ್ಲಿ ಮುಚ್ಚಿ ಹೋಗಲಿಲ್ಲವೇ?<br /> <br /> * ಮಲೆನಾಡಿನ ಕಾಡನ್ನು ಅಷ್ಟೊಂದು ಕೃತಕವಾಗಿ ‘ಗಾಳಿ ಯಂತ್ರ’ಗಳಂತೆ ನಿರ್ಮಿಸಿದ್ದೇಕೆ?<br /> <br /> * ಮೇಳಿಗೆ ದೇಗುಲದಲ್ಲಿ ಊಟಕ್ಕೆ ಬಡಿಸುವ ದೃಶ್ಯವನ್ನು ಮನರಂಜನೆಗೆ ಬಳಸಿಕೊಂಡು ಸಾಧಿಸಿದ್ದಾದರೂ ಏನು?<br /> <br /> * ಆಕಸ್ಮಿಕವಾಗಿ ಸಂಭವಿಸುವ ಚಂದ್ರಿ– ಆಚಾರ್ಯರ ಸಮಾಗಮದ ದೃಶ್ಯವನ್ನು ವಾತ್ಸ್ಯಾಯನ ಕಾಮ ಸೂತ್ರದಂತೆ ವೈಭವೀಕರಿಸುವ ಅಗತ್ಯವಿದೆಯೇ?<br /> ಹೀಗೆ ಪಟ್ಟಿ ಮುಗಿಯಲಾರದು.<br /> <br /> ನಾಟಕದ ಕೆಲವು ಗುಣಾಂಶಗಳೆಂದರೆ ಓ.ಎಲ್.ಎನ್. ಅವರ ಸುಂದರ ಸಾಹಿತ್ಯ – ಸಂಭಾಷಣೆ. ಶೀರ್ನಾಳಿ ಶ್ರೀಪತಿಯ ಕಲಾವಿದನಾಗುವ ಬಯಕೆಯನ್ನು ಯಕ್ಷಗಾನದ ಹಿನ್ನೆಲೆಯಲ್ಲಿ ತಂದದ್ದು. ಆ ಒಂದು ದಿನದ ಮಟ್ಟಿಗೆ ಬೆಳ್ಳಿ, ಶ್ರೀಪತಿಯನ್ನು ನಿರಾಕರಿಸುವ ಸಂಸ್ಕಾರ.<br /> <br /> ನಾಟಕದ ಅವಧಿ ಅತ್ಯಂತ ದೀರ್ಘವಾಗಿದ್ದು, ಕೃತಿಯ ಮೂಲ ಆಶಯಕ್ಕೆ ಪೂರಕವಲ್ಲದ ದೃಶ್ಯಗಳನ್ನು ಕತ್ತರಿಸಿ, ಹೇಳಬೇಕಾದ್ದನ್ನು ಒಂದು ಗಂಟೆಯೊಳಗೆ ಸರಳವಾಗಿ ಹೇಳಲು ಖಂಡಿತವಾಗಿಯೂ ಸಾಧ್ಯವಿದೆ. ಮುಂದಿನ ಪ್ರದರ್ಶನಗಳಲ್ಲಾದರೂ ಬದಲಾವಣೆ ಕಂಡೀತೆ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಪ್ರದರ್ಶಿತವಾದ ಯು.ಆರ್. ಅನಂತಮೂರ್ತಿ ಅವರ ‘ಸಂಸ್ಕಾರ’ ಕೃತಿಯಾಧಾರಿತ, ಮೈಸೂರು ರಂಗಾಯಣ ಪ್ರಸ್ತುತಿಯ ಅದೇ ಹೆಸರಿನ ನಾಟಕ ಪ್ರದರ್ಶನ ವೀಕ್ಷಿಸಿದ ನಂತರ ಅನ್ನಿಸಿದ್ದಿಷ್ಟು.<br /> <br /> ಕಚಾಕಚ್ ಭರ್ತಿಯಾಗಿದ್ದ ರಂಗಮಂದಿರ ರೋಮಾಂಚನದ ಅನುಭವ ನೀಡಿತ್ತು. ಆದರೆ ಪ್ರದರ್ಶನ ಮುಂದುವರಿದಂತೆ ಪ್ರೇಕ್ಷಕರ ವರ್ತನೆ ಅಸಹ್ಯ ತರಿಸುವಂತಿತ್ತು. ‘ಶವಸಂಸ್ಕಾರ’ದಂತಹ ಗಂಭೀರ ‘ಪ್ರಶ್ನೆ’ ಉಳ್ಳ ಮೂಲಕತೆಯ ಗಾಂಭೀರ್ಯ ಈ ಪ್ರದರ್ಶನದಲ್ಲಿ ಎಲ್ಲೂ ಕಂಡು ಬರಲಿಲ್ಲ. ಯಾರನ್ನಾದರೂ, ಏನನ್ನಾದರೂ ಹೀಯಾಳಿಸಿದಾಗ ಶಿಳ್ಳೆ, ಕೇಕೆ, ಚಪ್ಪಾಳೆಗಳ ಸುರಿಮಳೆಯಾಗುತ್ತಿತ್ತು. ಒಂದು ಹಂತದಲ್ಲಿ ಇದು ‘ನಗೆ ನಾಟಕವೇ?’ ಎಂಬ ಅನುಮಾನ ಬರುವಷ್ಟು ಕೆಟ್ಟ ವಾತಾವರಣವಿತ್ತು.<br /> <br /> <strong>ಪ್ರದರ್ಶನದ ನಂತರ ಉದ್ಭವಿಸಿದ ಪ್ರಶ್ನೆಗಳಿವು.</strong><br /> * ಚಂದ್ರಿ ಕಾಮದ ಸಂಕೇತವಾದಂತೆ ದಾಸಾಚಾರ್ಯ ಹಸಿವಿನ ಸಂಕೇತ. ಆದರೆ ಇಲ್ಲಿ ದಾಸಾಚಾರ್ಯ ವಿದೂಷಕನಂತೇಕೆ ಬಿಂಬಿತವಾಗಿದ್ದಾನೆ?<br /> <br /> * ಶ್ರೀಮಠದ ಆಚಾರ್ಯರು, ಇತ್ತೀಚಿನ ವಿಕೃತ ಸ್ವಾಮಿಗಳಂತೆ ಪರಿಹಾರ ಕೇಳಿ ಬಂದವರಿಗೆ ಮಲಗಿಕೊಂಡೇ ಕಾಲಿನಿಂದ ಉತ್ತರಿಸುವ ದೃಶ್ಯ ಲೇವಡಿಯ ಪರಮಾವಧಿ ಅಲ್ಲವೇ?<br /> <br /> * ಅಗತ್ಯವಿಲ್ಲದಿದ್ದರೂ ಬಹುಸಂಖ್ಯೆಯಲ್ಲಿ ವಿಧವೆಯರನ್ನು ತೆರೆ ಮೇಲೆ ತಂದ ಉದ್ದಿಶ್ಯವಾದರೂ ಏನು?<br /> <br /> * ವಚನದ ಇಂಪು ಹಾಗೂ ಸಂದೇಶ ಹಾಡಿದ ಅಬ್ಬರದಲ್ಲಿ ಮುಚ್ಚಿ ಹೋಗಲಿಲ್ಲವೇ?<br /> <br /> * ಮಲೆನಾಡಿನ ಕಾಡನ್ನು ಅಷ್ಟೊಂದು ಕೃತಕವಾಗಿ ‘ಗಾಳಿ ಯಂತ್ರ’ಗಳಂತೆ ನಿರ್ಮಿಸಿದ್ದೇಕೆ?<br /> <br /> * ಮೇಳಿಗೆ ದೇಗುಲದಲ್ಲಿ ಊಟಕ್ಕೆ ಬಡಿಸುವ ದೃಶ್ಯವನ್ನು ಮನರಂಜನೆಗೆ ಬಳಸಿಕೊಂಡು ಸಾಧಿಸಿದ್ದಾದರೂ ಏನು?<br /> <br /> * ಆಕಸ್ಮಿಕವಾಗಿ ಸಂಭವಿಸುವ ಚಂದ್ರಿ– ಆಚಾರ್ಯರ ಸಮಾಗಮದ ದೃಶ್ಯವನ್ನು ವಾತ್ಸ್ಯಾಯನ ಕಾಮ ಸೂತ್ರದಂತೆ ವೈಭವೀಕರಿಸುವ ಅಗತ್ಯವಿದೆಯೇ?<br /> ಹೀಗೆ ಪಟ್ಟಿ ಮುಗಿಯಲಾರದು.<br /> <br /> ನಾಟಕದ ಕೆಲವು ಗುಣಾಂಶಗಳೆಂದರೆ ಓ.ಎಲ್.ಎನ್. ಅವರ ಸುಂದರ ಸಾಹಿತ್ಯ – ಸಂಭಾಷಣೆ. ಶೀರ್ನಾಳಿ ಶ್ರೀಪತಿಯ ಕಲಾವಿದನಾಗುವ ಬಯಕೆಯನ್ನು ಯಕ್ಷಗಾನದ ಹಿನ್ನೆಲೆಯಲ್ಲಿ ತಂದದ್ದು. ಆ ಒಂದು ದಿನದ ಮಟ್ಟಿಗೆ ಬೆಳ್ಳಿ, ಶ್ರೀಪತಿಯನ್ನು ನಿರಾಕರಿಸುವ ಸಂಸ್ಕಾರ.<br /> <br /> ನಾಟಕದ ಅವಧಿ ಅತ್ಯಂತ ದೀರ್ಘವಾಗಿದ್ದು, ಕೃತಿಯ ಮೂಲ ಆಶಯಕ್ಕೆ ಪೂರಕವಲ್ಲದ ದೃಶ್ಯಗಳನ್ನು ಕತ್ತರಿಸಿ, ಹೇಳಬೇಕಾದ್ದನ್ನು ಒಂದು ಗಂಟೆಯೊಳಗೆ ಸರಳವಾಗಿ ಹೇಳಲು ಖಂಡಿತವಾಗಿಯೂ ಸಾಧ್ಯವಿದೆ. ಮುಂದಿನ ಪ್ರದರ್ಶನಗಳಲ್ಲಾದರೂ ಬದಲಾವಣೆ ಕಂಡೀತೆ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>