ಚಿತ್ರಗಳಲ್ಲಿ ನೋಡಿ: ಮಂಜು ಕವಿದ ವಾತಾವರಣದ ನಡುವೆ ದೇವೀರಮ್ಮ ಬೆಟ್ಟದಲ್ಲಿ ಭಕ್ತರ ದಂಡು
ಚಿಕ್ಕಮಗಳೂರು: ತಾಲ್ಲೂಕಿನ ದೇವೀರಮ್ಮ ಬೆಟ್ಟಕ್ಕೆ ದೀಪೋತ್ಸವ ಸಡಗರ ಮೇಳೈಸಿದೆ. ದೇವಿ ದರ್ಶನಕ್ಕೆ ಭಕ್ತರ ದಂಡು ಹರಿದಿದೆ.ನಸುಕಿನಿಂದಲೇ ಭಕ್ತರು ಕಾಲ್ನಡಿಗೆಯಲ್ಲಿ ಬೆಟ್ಟ ಏರುತ್ತಿದ್ದಾರೆ. ಬೆಟ್ಟದ ಮಂಟಪದಲ್ಲಿನ ದೇವಿ ದರ್ಶನ ಪಡೆದು ಪುನೀತ ಭಾವ ಮೆರೆಯುತ್ತಿದ್ದಾರೆ.ಶಾಸಕ ಸಿ.ಟಿ. ರವಿ ಮೊದಲಾದವರು ಬೆಟ್ಟದಲ್ಲಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.