ಛಬ್ಬಿ ಗ್ರಾಮದಲ್ಲಿ ಆರ್. ಅಶೋಕ ಗ್ರಾಮ ವಾಸ್ತವ್ಯ: ಸಾಂಸ್ಕೃತಿಕ ಕಾರ್ಯಕ್ರಮ ಚಿತ್ರಗಳು
ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿರುವ ಕಂದಾಯ ಸಚಿವ ಆರ್. ಅಶೋಕ ಅವರು ಅಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮನಸೋತರು. ನೃತ್ಯ ಕಾರ್ಯಕ್ರಮದ ಬಳಿಕ ಕಲಾ ತಂಡಕ್ಕೆ ವೇದಿಕೆ ಮೇಲೆ ಹೋಗಿ ಅಭಿನಂದನೆ ಸಲ್ಲಿಸಿದರು. ನೃತ್ಯದಲ್ಲಿ ಬಳಸಲಾದ ಛತ್ರಿ ಹಿಡಿದು ಪೋಟೊ ತೆಗೆಸಿಕೊಂಡಾಗ ಗ್ರಾಮಸ್ಥರಿಂದ ಕರತಾಡನ ಕೇಳಿ ಬಂತು.