<blockquote>ಈ ಯೋಜನೆಯಡಿ ಶೇ 50 ರಿಂದ ಶೇ 75 ರಷ್ಟು ಸಹಾಯಧನ ದೊರೆಯಲಿದೆ. ಫಲಾನುಭವಿಗಳು ಪ್ರಯಾಣಿಕ ಆಟೋ ರಿಕ್ಷಾ, ಸರಕು ಸಾಗಣಿಕೆಯ ವಾಹನ ಅಥವಾ ಟ್ಯಾಕ್ಸಿ ಖರೀದಿಗಾಗಿ ಬ್ಯಾಂಕುಗಳಿಂದ ವಾಹನದ ಬೆಲೆಯ ಶೇ 50 ರಷ್ಟು ಅಥವಾ ಗರಿಷ್ಠ ₹3 ಲಕ್ಷದ ವರೆಗೂ ಸಹಾಯಧನ ಪಡೆಯಬಹುದು.</blockquote>.<p>ರಾಜ್ಯ ಸರ್ಕಾರದ ಹಲವು ಅಭಿವೃದ್ಧಿ ಯೋಜನೆಗಳಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯೂ ಒಂದಾಗಿದೆ. ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಯುವಜನತೆಗೆ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದರಲ್ಲಿ ವಾಣಿಜ್ಯ ಉಪಯೋಗಗಳಿಗಾಗಿ ವಾಹನ ಖರೀದಿಗೆ ಹಾಗೂ ಹೊಸ ಉದ್ಯಮಗಳ ಆರಂಭಕ್ಕೆ ಸಹಾಯಧನವನ್ನು ನೀಡಲಾಗುತ್ತದೆ. </p>.ಉದ್ಯೋಗಿನಿ ಸಾಲ ಸೌಲಭ್ಯ: ಮಹಿಳೆಯರಿಂದ ಅರ್ಜಿ ಆಹ್ವಾನ.<p>ಈ ಯೋಜನೆಯಡಿ ಶೇ 50 ರಿಂದ ಶೇ 75 ರಷ್ಟು ಸಹಾಯಧನ ದೊರೆಯಲಿದೆ. ಫಲಾನುಭವಿಗಳು ಪ್ರಯಾಣಿಕ ಆಟೋ ರಿಕ್ಷಾ, ಸರಕು ಸಾಗಣಿಕೆಯ ವಾಹನ ಅಥವಾ ಟ್ಯಾಕ್ಸಿ ಖರೀದಿಗಾಗಿ ಬ್ಯಾಂಕುಗಳಿಂದ ವಾಹನದ ಬೆಲೆಯ ಶೇ 50 ರಷ್ಟು ಅಥವಾ ಗರಿಷ್ಠ ₹3 ಲಕ್ಷದ ವರೆಗೂ ಸಹಾಯಧನ ಪಡೆಯಬಹುದು.</p><p>ಈ ಯೋಜನೆಯನ್ನು ಪಡೆಯುವುದು ಹೇಗೆ? ಅಗತ್ಯ ಅರ್ಹತೆಗಳೇನು ಎಂಬ ಮಾಹಿತಿ ಇಲ್ಲಿದೆ.... </p>.ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ? .<blockquote><strong>ಯೋಜನೆಗೆ ಸಂಬಂಧಿಸಿದ ಮಾರ್ಗಸೂಚಿಗಳೇನು? </strong></blockquote>.<ul><li><p>ಈ ಯೋಜನೆಯನ್ನು ರಾಜ್ಯಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್ಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ.</p></li><li><p>ಮಹಿಳೆಯರಿಗೆ ಆದ್ಯತೆಯನ್ನು ನೀಡಲಾಗುವುದು. </p></li><li><p>ಈ ಯೋಜನೆಯಡಿ ಖರೀದಿಸಿದ ವಾಹನವನ್ನು ಸಾಲದ ಅವಧಿ ಮುಗಿಯುವವರೆಗೂ ಇತರರಿಗೆ ಮಾರಾಟ ಮಾಡುವಂತಿಲ್ಲ.</p></li><li><p>ವಾಹನ ಖರೀದಿಯ ನಂತರ ಅದರಿಂದ ಬರುವ ಆದಾಯದ ವಾರ್ಷಿಕ ವಿವರ, ತೆರಿಗೆ ಪಾವತಿ ಹಾಗೂ ವಿಮೆ ಪಾವತಿಯ ವಿವರಗಳನ್ನು ಜಿಲ್ಲಾ ಕಚೇರಿಗೆ ಸಲ್ಲಿಸುವುದು. </p></li><li><p>ವಾಹನದ ಮೇಲೆ ಕೆಎಂಡಿಸಿ ‘ಸಹಾಯಧನ ಪಡೆದಿದೆ‘ ಎಂದು ನಮೂದಿಸುವುದು ಕಡ್ಡಾಯ. </p></li><li><p>ಪ್ಯಾಸೆಂಜರ್ ಆಟೋರಿಕ್ಷಗಳಿಗೆ ಪರ್ಮಿಟ್ ಕಡ್ಡಾಯ.</p></li></ul>.<blockquote><strong>ಯಾರೆಲ್ಲಾ ಈ ಯೋಜನೆಗೆ ಅರ್ಹರು?</strong></blockquote>.<ul><li><p>ಈ ಯೋಜನೆಯಲ್ಲಿ ಸಾಲ ಸೌಲಭ್ಯ ಪಡೆಯುವವರು ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.</p></li><li><p>ಅರ್ಜಿದಾರರು ಲಘುವಾಹನ ಚಾಲನಾ ಪರವಾನಿಗೆಯನ್ನು ಹೊಂದಿರುವುದು ಕಡ್ಡಾಯ.</p></li><li><p>ಕುಟುಂಬದ ಆದಾಯ ₹6 ಲಕ್ಷ ಮೀರಬಾರದು. </p></li><li><p>ಕರ್ನಾಟಕದ ನಿವಾಸಿಯಾಗಿರಬೇಕು. </p></li><li><p>ಅರ್ಜಿದಾರನ ವಯೋಮಿತಿ 18 ರಿಂದ 55 ವರ್ಷಗಳೊಳಗೆ ಇರಬೇಕು.</p></li><li><p>ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿರಬಾರದು.</p></li><li><p>ಸ್ಥಳೀಯ ರಾಷ್ಟೀಕೃತ ಬ್ಯಾಂಕಿನಲ್ಲಿ ಆಧಾರ್ ಸಂಯೋಜನೆಯಾಗಿರುವ ಬ್ಯಾಂಕ್ ಖಾತೆಯನ್ನು ಅರ್ಜಿದಾರರು ಹೊಂದಿರಬೇಕು. </p></li><li><p>ತೃತೀಯ ಲಿಂಗಿ ಹಾಗೂ ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು.</p></li><li><p>ವಾಹನಗಳನ್ನು ಬಾಡಿಗೆ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು.</p></li><li><p>ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬಸ್ಥರು ಸರ್ಕಾರಿ ಉದ್ಯೋಗದಲ್ಲಿ ಇರಬಾರದು </p></li></ul>.<blockquote><strong>ಅರ್ಜಿಸಲ್ಲಿಸಲು ಅಗತ್ಯ ದಾಖಲೆಗಳೇನು?</strong> </blockquote>.ಯಾರಿಗೆಲ್ಲ ಸಿಗಲಿದೆ ಭಾಗ್ಯಲಕ್ಷ್ಮಿಯ ಫಲ? ಏನೆಲ್ಲಾ ಲಾಭ, ಅರ್ಹತೆಗಳೇನು?.<p><strong>ಆನ್ಲೈನ್ ಮೂಲಕ ಆರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು ಯಾವುವು ಎಂಬ ಪಟ್ಟಿ ಇಲ್ಲಿದೆ.</strong> </p><ul><li><p>ಇತ್ತೀಚಿನ 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ.</p></li><li><p>ಜಾತಿ, ಆದಾಯ ಪ್ರಮಾಣ ಪತ್ರ.</p></li><li><p>ಆಧಾರ್ ಕಾರ್ಡ್ ಪ್ರತಿ.</p></li><li><p>ವಾಹನ ಚಾಲನ ಪರವಾನಗಿ ಪ್ರಮಾಣ ಪತ್ರ.</p></li><li><p>ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನ ಖರೀದಿಗೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ದೃಢೀಕರಣ ಪತ್ರ. </p></li><li><p>ಈ ಯೋಜನೆಯಡಿ ಪಡೆದ ವಾಹನವನ್ನು ಅವಧಿಗೆ ಮುನ್ನ ಯಾರಿಗೂ ಮಾರಾಟ ಮಾಡುವುದಿಲ್ಲ ಎಂಬ ದೃಢೀಕರಣ ಪತ್ರ.</p></li></ul>.<blockquote><strong>ಸಾಲದ ಮರುಪಾವತಿ ಹೇಗೆ?</strong> </blockquote>.<p>ಈ ಯೋಜನೆಯಲ್ಲಿ ಬ್ಯಾಂಕುಗಳಿಂದ ಪಡೆದ ಸಾಲವನ್ನು ಬ್ಯಾಂಕುಗಳು ನಿಗದಿ ಪಡಿಸುವ ಕಂತುಗಳಲ್ಲಿ ಪಾವತಿ ಮಾಡಬೇಕಾಗುತ್ತದೆ. ಅನುದಾನ ಹೊರೆತು ಪಡಿಸಿ ಉಳಿದ ಅಸಲು ಮತ್ತು ಬಡ್ಡಿಯ ಹಣವನ್ನು ಮಾಸಿಕವಾಗಿ ಮರುಪಾವತಿ ಮಾಡಬೇಕು. </p>.<p><strong>ಯೋಜನೆ ಕುರಿತ ಹೆಚ್ಚಿನ ಮಾಹಿತಿ ಪಡೆಯಲು ಸರ್ಕಾರದ ಅಧಿಕೃತ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಈ ಯೋಜನೆಯಡಿ ಶೇ 50 ರಿಂದ ಶೇ 75 ರಷ್ಟು ಸಹಾಯಧನ ದೊರೆಯಲಿದೆ. ಫಲಾನುಭವಿಗಳು ಪ್ರಯಾಣಿಕ ಆಟೋ ರಿಕ್ಷಾ, ಸರಕು ಸಾಗಣಿಕೆಯ ವಾಹನ ಅಥವಾ ಟ್ಯಾಕ್ಸಿ ಖರೀದಿಗಾಗಿ ಬ್ಯಾಂಕುಗಳಿಂದ ವಾಹನದ ಬೆಲೆಯ ಶೇ 50 ರಷ್ಟು ಅಥವಾ ಗರಿಷ್ಠ ₹3 ಲಕ್ಷದ ವರೆಗೂ ಸಹಾಯಧನ ಪಡೆಯಬಹುದು.</blockquote>.<p>ರಾಜ್ಯ ಸರ್ಕಾರದ ಹಲವು ಅಭಿವೃದ್ಧಿ ಯೋಜನೆಗಳಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯೂ ಒಂದಾಗಿದೆ. ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಯುವಜನತೆಗೆ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದರಲ್ಲಿ ವಾಣಿಜ್ಯ ಉಪಯೋಗಗಳಿಗಾಗಿ ವಾಹನ ಖರೀದಿಗೆ ಹಾಗೂ ಹೊಸ ಉದ್ಯಮಗಳ ಆರಂಭಕ್ಕೆ ಸಹಾಯಧನವನ್ನು ನೀಡಲಾಗುತ್ತದೆ. </p>.ಉದ್ಯೋಗಿನಿ ಸಾಲ ಸೌಲಭ್ಯ: ಮಹಿಳೆಯರಿಂದ ಅರ್ಜಿ ಆಹ್ವಾನ.<p>ಈ ಯೋಜನೆಯಡಿ ಶೇ 50 ರಿಂದ ಶೇ 75 ರಷ್ಟು ಸಹಾಯಧನ ದೊರೆಯಲಿದೆ. ಫಲಾನುಭವಿಗಳು ಪ್ರಯಾಣಿಕ ಆಟೋ ರಿಕ್ಷಾ, ಸರಕು ಸಾಗಣಿಕೆಯ ವಾಹನ ಅಥವಾ ಟ್ಯಾಕ್ಸಿ ಖರೀದಿಗಾಗಿ ಬ್ಯಾಂಕುಗಳಿಂದ ವಾಹನದ ಬೆಲೆಯ ಶೇ 50 ರಷ್ಟು ಅಥವಾ ಗರಿಷ್ಠ ₹3 ಲಕ್ಷದ ವರೆಗೂ ಸಹಾಯಧನ ಪಡೆಯಬಹುದು.</p><p>ಈ ಯೋಜನೆಯನ್ನು ಪಡೆಯುವುದು ಹೇಗೆ? ಅಗತ್ಯ ಅರ್ಹತೆಗಳೇನು ಎಂಬ ಮಾಹಿತಿ ಇಲ್ಲಿದೆ.... </p>.ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ? .<blockquote><strong>ಯೋಜನೆಗೆ ಸಂಬಂಧಿಸಿದ ಮಾರ್ಗಸೂಚಿಗಳೇನು? </strong></blockquote>.<ul><li><p>ಈ ಯೋಜನೆಯನ್ನು ರಾಜ್ಯಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್ಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ.</p></li><li><p>ಮಹಿಳೆಯರಿಗೆ ಆದ್ಯತೆಯನ್ನು ನೀಡಲಾಗುವುದು. </p></li><li><p>ಈ ಯೋಜನೆಯಡಿ ಖರೀದಿಸಿದ ವಾಹನವನ್ನು ಸಾಲದ ಅವಧಿ ಮುಗಿಯುವವರೆಗೂ ಇತರರಿಗೆ ಮಾರಾಟ ಮಾಡುವಂತಿಲ್ಲ.</p></li><li><p>ವಾಹನ ಖರೀದಿಯ ನಂತರ ಅದರಿಂದ ಬರುವ ಆದಾಯದ ವಾರ್ಷಿಕ ವಿವರ, ತೆರಿಗೆ ಪಾವತಿ ಹಾಗೂ ವಿಮೆ ಪಾವತಿಯ ವಿವರಗಳನ್ನು ಜಿಲ್ಲಾ ಕಚೇರಿಗೆ ಸಲ್ಲಿಸುವುದು. </p></li><li><p>ವಾಹನದ ಮೇಲೆ ಕೆಎಂಡಿಸಿ ‘ಸಹಾಯಧನ ಪಡೆದಿದೆ‘ ಎಂದು ನಮೂದಿಸುವುದು ಕಡ್ಡಾಯ. </p></li><li><p>ಪ್ಯಾಸೆಂಜರ್ ಆಟೋರಿಕ್ಷಗಳಿಗೆ ಪರ್ಮಿಟ್ ಕಡ್ಡಾಯ.</p></li></ul>.<blockquote><strong>ಯಾರೆಲ್ಲಾ ಈ ಯೋಜನೆಗೆ ಅರ್ಹರು?</strong></blockquote>.<ul><li><p>ಈ ಯೋಜನೆಯಲ್ಲಿ ಸಾಲ ಸೌಲಭ್ಯ ಪಡೆಯುವವರು ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.</p></li><li><p>ಅರ್ಜಿದಾರರು ಲಘುವಾಹನ ಚಾಲನಾ ಪರವಾನಿಗೆಯನ್ನು ಹೊಂದಿರುವುದು ಕಡ್ಡಾಯ.</p></li><li><p>ಕುಟುಂಬದ ಆದಾಯ ₹6 ಲಕ್ಷ ಮೀರಬಾರದು. </p></li><li><p>ಕರ್ನಾಟಕದ ನಿವಾಸಿಯಾಗಿರಬೇಕು. </p></li><li><p>ಅರ್ಜಿದಾರನ ವಯೋಮಿತಿ 18 ರಿಂದ 55 ವರ್ಷಗಳೊಳಗೆ ಇರಬೇಕು.</p></li><li><p>ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿರಬಾರದು.</p></li><li><p>ಸ್ಥಳೀಯ ರಾಷ್ಟೀಕೃತ ಬ್ಯಾಂಕಿನಲ್ಲಿ ಆಧಾರ್ ಸಂಯೋಜನೆಯಾಗಿರುವ ಬ್ಯಾಂಕ್ ಖಾತೆಯನ್ನು ಅರ್ಜಿದಾರರು ಹೊಂದಿರಬೇಕು. </p></li><li><p>ತೃತೀಯ ಲಿಂಗಿ ಹಾಗೂ ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು.</p></li><li><p>ವಾಹನಗಳನ್ನು ಬಾಡಿಗೆ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು.</p></li><li><p>ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬಸ್ಥರು ಸರ್ಕಾರಿ ಉದ್ಯೋಗದಲ್ಲಿ ಇರಬಾರದು </p></li></ul>.<blockquote><strong>ಅರ್ಜಿಸಲ್ಲಿಸಲು ಅಗತ್ಯ ದಾಖಲೆಗಳೇನು?</strong> </blockquote>.ಯಾರಿಗೆಲ್ಲ ಸಿಗಲಿದೆ ಭಾಗ್ಯಲಕ್ಷ್ಮಿಯ ಫಲ? ಏನೆಲ್ಲಾ ಲಾಭ, ಅರ್ಹತೆಗಳೇನು?.<p><strong>ಆನ್ಲೈನ್ ಮೂಲಕ ಆರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು ಯಾವುವು ಎಂಬ ಪಟ್ಟಿ ಇಲ್ಲಿದೆ.</strong> </p><ul><li><p>ಇತ್ತೀಚಿನ 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ.</p></li><li><p>ಜಾತಿ, ಆದಾಯ ಪ್ರಮಾಣ ಪತ್ರ.</p></li><li><p>ಆಧಾರ್ ಕಾರ್ಡ್ ಪ್ರತಿ.</p></li><li><p>ವಾಹನ ಚಾಲನ ಪರವಾನಗಿ ಪ್ರಮಾಣ ಪತ್ರ.</p></li><li><p>ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನ ಖರೀದಿಗೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ದೃಢೀಕರಣ ಪತ್ರ. </p></li><li><p>ಈ ಯೋಜನೆಯಡಿ ಪಡೆದ ವಾಹನವನ್ನು ಅವಧಿಗೆ ಮುನ್ನ ಯಾರಿಗೂ ಮಾರಾಟ ಮಾಡುವುದಿಲ್ಲ ಎಂಬ ದೃಢೀಕರಣ ಪತ್ರ.</p></li></ul>.<blockquote><strong>ಸಾಲದ ಮರುಪಾವತಿ ಹೇಗೆ?</strong> </blockquote>.<p>ಈ ಯೋಜನೆಯಲ್ಲಿ ಬ್ಯಾಂಕುಗಳಿಂದ ಪಡೆದ ಸಾಲವನ್ನು ಬ್ಯಾಂಕುಗಳು ನಿಗದಿ ಪಡಿಸುವ ಕಂತುಗಳಲ್ಲಿ ಪಾವತಿ ಮಾಡಬೇಕಾಗುತ್ತದೆ. ಅನುದಾನ ಹೊರೆತು ಪಡಿಸಿ ಉಳಿದ ಅಸಲು ಮತ್ತು ಬಡ್ಡಿಯ ಹಣವನ್ನು ಮಾಸಿಕವಾಗಿ ಮರುಪಾವತಿ ಮಾಡಬೇಕು. </p>.<p><strong>ಯೋಜನೆ ಕುರಿತ ಹೆಚ್ಚಿನ ಮಾಹಿತಿ ಪಡೆಯಲು ಸರ್ಕಾರದ ಅಧಿಕೃತ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>