<p>ಮಾನವಪ್ರೇಮವೇ ಪ್ರಮುಖವಾದದ್ದು ಎಂದು ಪ್ರತಿಪಾದಿಸಿದ್ದ ಸ್ವಾಮಿ ವಿವೇಕಾನಂದರು, ತಾವು ಸ್ಥಾಪಿಸಿದ ರಾಮಕೃಷ್ಣ ಮಹಾಸಂಘದ ಘೋಷವಾಕ್ಯವನ್ನೂ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ಎಂದಿರಿಸಿದ್ದರು. ಅಂದರೆ ಜಗತ್ತಿನ ಹಿತ ಸಾಧಿಸುವುದರೊಂದಿಗೇ ಮುಕ್ತಿಯನ್ನು ಕಾಣುವುದು ಎಂದಾಗಿತ್ತು. </p>.ಬರಗೂರು ರಾಮಚಂದ್ರಪ್ಪ ಅವರ ವಿಶ್ಲೇಷಣೆ: ಎಲ್ಲ ಧರ್ಮಗಳ ‘ವಿವೇಕ’.National Youth Day: ವಿವೇಕಾನಂದರು ಯುವ ಸಮುದಾಯಕ್ಕೆ ‘ನಿತ್ಯ ಸ್ಫೂರ್ತಿ’ .<p>ವಿವೇಕಾನಂದರು ಸಮಾಜದ ವೈವಿಧ್ಯಕ್ಕೆ ಬೆಲೆ ಕೊಟ್ಟವರು. ಅಂತೆಯೇ ಧಾರ್ಮಿಕ ಸಹಿಷ್ಣುತೆಯ ಪ್ರತಿಪಾದಕರು. 1893ರ ಸೆಪ್ಟೆಂಬರ್ 11ರಂದು ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದಲ್ಲಿ ವಿವೇಕಾನಂದರು ನಮ್ಮ ದೇಶದ ಮತ್ತು ಧರ್ಮದ ಬಗ್ಗೆ ಹೇಳಿದ ಮಾತುಗಳು ಇಂದಿಗೂ ಅನುಸರಣೀಯ ಆದರ್ಶವನ್ನು ಒಳಗೊಂಡಿವೆ. </p>.National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?.<p>ವಿವೇಕಾನಂದರು ಸರ್ವಧರ್ಮ ಸಮ್ಮೇಳನದ ಕೊನೆಯ ದಿನ, 1893ರ ಸೆಪ್ಟೆಂಬರ್ 27ರಂದು ನೀಡಿದ ಉಪನ್ಯಾಸದ ಕೊನೆಯಲ್ಲಿ ಹೇಳಿದ್ದು: ‘ಸಂಘರ್ಷವಲ್ಲ, ಸೌಹಾರ್ದ; ವಿನಾಶವಲ್ಲ, ಸ್ವೀಕಾರ; ದ್ವೇಷವಲ್ಲ, ಸಾಮರಸ್ಯ ಮತ್ತು ಶಾಂತಿ’. ಎಲ್ಲ ಧರ್ಮಗಳಿಗೆ ವಿವೇಕಾನಂದರ ಈ ಆಶಯ ಅರ್ಥವಾಗಬೇಕು; ಎಲ್ಲ ಧರ್ಮಗಳಲ್ಲೂ ‘ವಿವೇಕಾನಂದರು’ ಇರಬೇಕು.</p>.National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?. <p>ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದರ ವಿವೇಕಾನಂದರ ಕೆಲವು ನುಡಿಗಳು ಇಲ್ಲಿವೆ.</p><ul><li><p>ನಿಮ್ಮನ್ನು ನೀವು ದುರ್ಬಲ ಎಂದು ಪರಿಗಣಿಸುವುದೇ ದೊಡ್ಡ ಪಾಪ.</p></li><li><p>ಒಬ್ಬ ರಾಷ್ಟ್ರವು ಜನರ ಶಿಕ್ಷಣ ಮತ್ತು ಬುದ್ಧಿವಂತಿಕೆಯಿಂದ ಅಭಿವೃದ್ಧಿ ಹೊಂದುತ್ತದೆ.</p></li><li><p>ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ.</p></li><li><p>ಯಾರಿಗೆ ತನ್ನ ಮೇಲೆಯೇ ನಂಬಿಕೆ ಇರುವುದಿಲ್ಲವೋ ಅವನೇ ನಾಸ್ತಿಕ</p></li><li><p>ಅನುಭವವೇ ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ ಇರಲಿ.</p></li><li><p>ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ನೀವು ಮಾತನಾಡಿ. ಇಲ್ಲದಿದ್ದರೆ, ನೀವು ವಿಶ್ವದ ಅತ್ಯಂತ ಬುದ್ಧಿವಂತ ವ್ಯಕ್ತಿಯೊಂದಿಗೆ ಸಂವಹನ ಮಾಡುವುದನ್ನು ಕಳೆದುಕೊಳ್ಳುತ್ತೀರಿ</p></li><li><p>ನಾವು ಬಿತ್ತಿದ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ನಿಮ್ಮ ಆಲೋಚನೆಗಳ ಬಗ್ಗೆ ಎಚ್ಚರವಿರಲಿ. ಪದಗಳು ಮುಖ್ಯವಲ್ಲ, ಆಲೋಚನೆಗಳು ದೀರ್ಘಕಾಲ ಬದುಕುತ್ತವೆ.</p></li><li><p>ಸಾವಿರ ಬಾರಿ ಸತ್ಯವನ್ನು ಹೇಳಿದರೂ ಅದು ಸತ್ಯವಾಗಿಯೇ ಇರುತ್ತದೆ. ಆದರೆ ಒಂದೇ ಒಂದು ಅಸತ್ಯವು ಸಾವಿರ ಮುಖವಾಡಗಳನ್ನು ಹಾಕಿಕೊಂಡರೂ ಸತ್ಯವಾಗಲು ಸಾಧ್ಯವಿಲ್ಲ.</p></li><li><p>ಯಾರನ್ನೂ ಟೀಕಿಸಬೇಡಿ. ನೀವು ಸಹಾಯ ಮಾಡಲು ಸಾಧ್ಯವಾದರೆ ಕೈ ಚಾಚಿ, ಇಲ್ಲದಿದ್ದರೆ ಕೈ ಮುಗಿದು ಅವರು ತಮ್ಮ ಹಾದಿಯಲ್ಲಿ ಸಾಗಲು ಹರಸಿ.</p></li><li><p>ಅತಿಯಾದ ವಿನಯವು ಕೆಲವು ಬಾರಿ ಧೂರ್ತತನದ ಲಕ್ಷಣವೂ ಆಗಿರಬಹುದು, ಆದ್ದರಿಂದ ಅತಿ ವಿನಯಕ್ಕಿಂತ ನೇರ ನುಡಿ ಲೇಸು. ನೀವು ನಿಮ್ಮನ್ನು ದೇವರೆಂದು ನಂಬುವ ಮೊದಲು, ನಿಮ್ಮನ್ನು ನೀವು ಮನುಷ್ಯನೆಂದು ನಂಬಿ ಮತ್ತು ಇತರರನ್ನು ಗೌರವಿಸಿ.</p></li><li><p>ವಿಕಾಸವೇ ಜೀವನ ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ ಸ್ವಾರ್ಥವೆಲ್ಲಾ ಸಂಕೋಚ ಆದುದರಿಂದ ಪ್ರೇಮವೇ ಬದುಕಿನ ಧರ್ಮ.</p></li><li><p>ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾನವಪ್ರೇಮವೇ ಪ್ರಮುಖವಾದದ್ದು ಎಂದು ಪ್ರತಿಪಾದಿಸಿದ್ದ ಸ್ವಾಮಿ ವಿವೇಕಾನಂದರು, ತಾವು ಸ್ಥಾಪಿಸಿದ ರಾಮಕೃಷ್ಣ ಮಹಾಸಂಘದ ಘೋಷವಾಕ್ಯವನ್ನೂ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ಎಂದಿರಿಸಿದ್ದರು. ಅಂದರೆ ಜಗತ್ತಿನ ಹಿತ ಸಾಧಿಸುವುದರೊಂದಿಗೇ ಮುಕ್ತಿಯನ್ನು ಕಾಣುವುದು ಎಂದಾಗಿತ್ತು. </p>.ಬರಗೂರು ರಾಮಚಂದ್ರಪ್ಪ ಅವರ ವಿಶ್ಲೇಷಣೆ: ಎಲ್ಲ ಧರ್ಮಗಳ ‘ವಿವೇಕ’.National Youth Day: ವಿವೇಕಾನಂದರು ಯುವ ಸಮುದಾಯಕ್ಕೆ ‘ನಿತ್ಯ ಸ್ಫೂರ್ತಿ’ .<p>ವಿವೇಕಾನಂದರು ಸಮಾಜದ ವೈವಿಧ್ಯಕ್ಕೆ ಬೆಲೆ ಕೊಟ್ಟವರು. ಅಂತೆಯೇ ಧಾರ್ಮಿಕ ಸಹಿಷ್ಣುತೆಯ ಪ್ರತಿಪಾದಕರು. 1893ರ ಸೆಪ್ಟೆಂಬರ್ 11ರಂದು ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದಲ್ಲಿ ವಿವೇಕಾನಂದರು ನಮ್ಮ ದೇಶದ ಮತ್ತು ಧರ್ಮದ ಬಗ್ಗೆ ಹೇಳಿದ ಮಾತುಗಳು ಇಂದಿಗೂ ಅನುಸರಣೀಯ ಆದರ್ಶವನ್ನು ಒಳಗೊಂಡಿವೆ. </p>.National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?.<p>ವಿವೇಕಾನಂದರು ಸರ್ವಧರ್ಮ ಸಮ್ಮೇಳನದ ಕೊನೆಯ ದಿನ, 1893ರ ಸೆಪ್ಟೆಂಬರ್ 27ರಂದು ನೀಡಿದ ಉಪನ್ಯಾಸದ ಕೊನೆಯಲ್ಲಿ ಹೇಳಿದ್ದು: ‘ಸಂಘರ್ಷವಲ್ಲ, ಸೌಹಾರ್ದ; ವಿನಾಶವಲ್ಲ, ಸ್ವೀಕಾರ; ದ್ವೇಷವಲ್ಲ, ಸಾಮರಸ್ಯ ಮತ್ತು ಶಾಂತಿ’. ಎಲ್ಲ ಧರ್ಮಗಳಿಗೆ ವಿವೇಕಾನಂದರ ಈ ಆಶಯ ಅರ್ಥವಾಗಬೇಕು; ಎಲ್ಲ ಧರ್ಮಗಳಲ್ಲೂ ‘ವಿವೇಕಾನಂದರು’ ಇರಬೇಕು.</p>.National Youth Day: ಯುವಕರು ಯಾವುದರ ಬಗ್ಗೆ ಚಿಂತಿಸಬೇಕು?. <p>ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದರ ವಿವೇಕಾನಂದರ ಕೆಲವು ನುಡಿಗಳು ಇಲ್ಲಿವೆ.</p><ul><li><p>ನಿಮ್ಮನ್ನು ನೀವು ದುರ್ಬಲ ಎಂದು ಪರಿಗಣಿಸುವುದೇ ದೊಡ್ಡ ಪಾಪ.</p></li><li><p>ಒಬ್ಬ ರಾಷ್ಟ್ರವು ಜನರ ಶಿಕ್ಷಣ ಮತ್ತು ಬುದ್ಧಿವಂತಿಕೆಯಿಂದ ಅಭಿವೃದ್ಧಿ ಹೊಂದುತ್ತದೆ.</p></li><li><p>ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ.</p></li><li><p>ಯಾರಿಗೆ ತನ್ನ ಮೇಲೆಯೇ ನಂಬಿಕೆ ಇರುವುದಿಲ್ಲವೋ ಅವನೇ ನಾಸ್ತಿಕ</p></li><li><p>ಅನುಭವವೇ ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ ಇರಲಿ.</p></li><li><p>ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ನೀವು ಮಾತನಾಡಿ. ಇಲ್ಲದಿದ್ದರೆ, ನೀವು ವಿಶ್ವದ ಅತ್ಯಂತ ಬುದ್ಧಿವಂತ ವ್ಯಕ್ತಿಯೊಂದಿಗೆ ಸಂವಹನ ಮಾಡುವುದನ್ನು ಕಳೆದುಕೊಳ್ಳುತ್ತೀರಿ</p></li><li><p>ನಾವು ಬಿತ್ತಿದ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ನಿಮ್ಮ ಆಲೋಚನೆಗಳ ಬಗ್ಗೆ ಎಚ್ಚರವಿರಲಿ. ಪದಗಳು ಮುಖ್ಯವಲ್ಲ, ಆಲೋಚನೆಗಳು ದೀರ್ಘಕಾಲ ಬದುಕುತ್ತವೆ.</p></li><li><p>ಸಾವಿರ ಬಾರಿ ಸತ್ಯವನ್ನು ಹೇಳಿದರೂ ಅದು ಸತ್ಯವಾಗಿಯೇ ಇರುತ್ತದೆ. ಆದರೆ ಒಂದೇ ಒಂದು ಅಸತ್ಯವು ಸಾವಿರ ಮುಖವಾಡಗಳನ್ನು ಹಾಕಿಕೊಂಡರೂ ಸತ್ಯವಾಗಲು ಸಾಧ್ಯವಿಲ್ಲ.</p></li><li><p>ಯಾರನ್ನೂ ಟೀಕಿಸಬೇಡಿ. ನೀವು ಸಹಾಯ ಮಾಡಲು ಸಾಧ್ಯವಾದರೆ ಕೈ ಚಾಚಿ, ಇಲ್ಲದಿದ್ದರೆ ಕೈ ಮುಗಿದು ಅವರು ತಮ್ಮ ಹಾದಿಯಲ್ಲಿ ಸಾಗಲು ಹರಸಿ.</p></li><li><p>ಅತಿಯಾದ ವಿನಯವು ಕೆಲವು ಬಾರಿ ಧೂರ್ತತನದ ಲಕ್ಷಣವೂ ಆಗಿರಬಹುದು, ಆದ್ದರಿಂದ ಅತಿ ವಿನಯಕ್ಕಿಂತ ನೇರ ನುಡಿ ಲೇಸು. ನೀವು ನಿಮ್ಮನ್ನು ದೇವರೆಂದು ನಂಬುವ ಮೊದಲು, ನಿಮ್ಮನ್ನು ನೀವು ಮನುಷ್ಯನೆಂದು ನಂಬಿ ಮತ್ತು ಇತರರನ್ನು ಗೌರವಿಸಿ.</p></li><li><p>ವಿಕಾಸವೇ ಜೀವನ ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ ಸ್ವಾರ್ಥವೆಲ್ಲಾ ಸಂಕೋಚ ಆದುದರಿಂದ ಪ್ರೇಮವೇ ಬದುಕಿನ ಧರ್ಮ.</p></li><li><p>ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>