<p><strong>ದುಬೈ:</strong> ಏಷ್ಯಾ ಕಪ್ನಲ್ಲಿ ಭಾರತ ತಂಡವನ್ನು ಯಾವ ತಂಡ ಬೇಕಾದರೂ ಸೋಲಿಸಬಹುದು ಎಂದು ಬಾಂಗ್ಲಾದೇಶ ಕ್ರಿಕೆಟ್ ತಂಡದ ಮುಖ್ಯ ಕೋಚ್ ಫಿಲ್ ಸಿಮನ್ಸ್ ಹೇಳಿದ್ದಾರೆ. </p><p>ಈ ಬಾರಿಯ ಏಷ್ಯಾ ಕಪ್ನಲ್ಲಿ ಅಜೇಯವಾಗಿರುವ ಭಾರತ ತಂಡವನ್ನು ಬುಧವಾರ ಸೂಪರ್–4 ಪಂದ್ಯದಲ್ಲಿ ಬಾಂಗ್ಲಾದೇಶ ಎದುರಿಸಲಿದೆ. </p><p>ಕಳೆದ ನಾಲ್ಕು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಪಡೆಯು ಆಡಿರುವ ಆಟವು, ಬಾಂಗ್ಲಾ ಮೇಲಿನ ಪಂದ್ಯದಲ್ಲಿ ಪರಿಣಾಮ ಬೀರುವುದಿಲ್ಲ. ಟಿ–20 ಕ್ರಿಕೆಟ್ನಲ್ಲಿ ಮೂರುವರೆ ಗಂಟೆಗಳ ಆಟ ಮಾತ್ರ ಪಂದ್ಯದ ಫಲಿತಾಂಶವನ್ನು ನಿರ್ಧರಿಸುತ್ತದೆ. ಎಲ್ಲಾ ತಂಡಗಳಿಗೂ ಭಾರತವನ್ನು ಸೋಲಿಸುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.</p><p>ದುಬೈ ಕ್ರೀಡಾಂಗಣವು ಬ್ಯಾಟರ್ಗಳಿಗೆ ನೆರವು ನೀಡುತ್ತಿದೆ. ಇಲ್ಲಿ ಟಾಸ್ ಪ್ರಮುಖ ಪಾತ್ರವಹಿಸುವುದಿಲ್ಲ. ನಾವು ಕೇವಲ ಶ್ರೀಲಂಕಾ ವಿರುದ್ಧ ಗೆಲ್ಲಲು ಮಾತ್ರ ಬಂದಿಲ್ಲ, ಪ್ರಶಸ್ತಿ ಗೆಲ್ಲಲು ಬಂದಿದ್ದೇವೆ ಎಂದು ಫಿಲ್ ಸಿಮನ್ಸ್ ತಿಳಿಸಿದ್ದಾರೆ.</p><p>ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶವು ಶ್ರೀಲಂಕಾ ವಿರುದ್ಧ 4 ವಿಕೆಟ್ಗಳ ಜಯಗಳಿಸಿತ್ತು. </p>.ಯುವರಾಜ್ ಸಿಂಗ್ ಪರಂಪರೆಯನ್ನು ಅಭಿಷೇಕ್ ಶರ್ಮಾ ಮುಂದುವರಿಸುತ್ತಾರೆ: ಆರ್.ಅಶ್ವಿನ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದುಬೈ:</strong> ಏಷ್ಯಾ ಕಪ್ನಲ್ಲಿ ಭಾರತ ತಂಡವನ್ನು ಯಾವ ತಂಡ ಬೇಕಾದರೂ ಸೋಲಿಸಬಹುದು ಎಂದು ಬಾಂಗ್ಲಾದೇಶ ಕ್ರಿಕೆಟ್ ತಂಡದ ಮುಖ್ಯ ಕೋಚ್ ಫಿಲ್ ಸಿಮನ್ಸ್ ಹೇಳಿದ್ದಾರೆ. </p><p>ಈ ಬಾರಿಯ ಏಷ್ಯಾ ಕಪ್ನಲ್ಲಿ ಅಜೇಯವಾಗಿರುವ ಭಾರತ ತಂಡವನ್ನು ಬುಧವಾರ ಸೂಪರ್–4 ಪಂದ್ಯದಲ್ಲಿ ಬಾಂಗ್ಲಾದೇಶ ಎದುರಿಸಲಿದೆ. </p><p>ಕಳೆದ ನಾಲ್ಕು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಪಡೆಯು ಆಡಿರುವ ಆಟವು, ಬಾಂಗ್ಲಾ ಮೇಲಿನ ಪಂದ್ಯದಲ್ಲಿ ಪರಿಣಾಮ ಬೀರುವುದಿಲ್ಲ. ಟಿ–20 ಕ್ರಿಕೆಟ್ನಲ್ಲಿ ಮೂರುವರೆ ಗಂಟೆಗಳ ಆಟ ಮಾತ್ರ ಪಂದ್ಯದ ಫಲಿತಾಂಶವನ್ನು ನಿರ್ಧರಿಸುತ್ತದೆ. ಎಲ್ಲಾ ತಂಡಗಳಿಗೂ ಭಾರತವನ್ನು ಸೋಲಿಸುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.</p><p>ದುಬೈ ಕ್ರೀಡಾಂಗಣವು ಬ್ಯಾಟರ್ಗಳಿಗೆ ನೆರವು ನೀಡುತ್ತಿದೆ. ಇಲ್ಲಿ ಟಾಸ್ ಪ್ರಮುಖ ಪಾತ್ರವಹಿಸುವುದಿಲ್ಲ. ನಾವು ಕೇವಲ ಶ್ರೀಲಂಕಾ ವಿರುದ್ಧ ಗೆಲ್ಲಲು ಮಾತ್ರ ಬಂದಿಲ್ಲ, ಪ್ರಶಸ್ತಿ ಗೆಲ್ಲಲು ಬಂದಿದ್ದೇವೆ ಎಂದು ಫಿಲ್ ಸಿಮನ್ಸ್ ತಿಳಿಸಿದ್ದಾರೆ.</p><p>ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶವು ಶ್ರೀಲಂಕಾ ವಿರುದ್ಧ 4 ವಿಕೆಟ್ಗಳ ಜಯಗಳಿಸಿತ್ತು. </p>.ಯುವರಾಜ್ ಸಿಂಗ್ ಪರಂಪರೆಯನ್ನು ಅಭಿಷೇಕ್ ಶರ್ಮಾ ಮುಂದುವರಿಸುತ್ತಾರೆ: ಆರ್.ಅಶ್ವಿನ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>