<figcaption>""</figcaption>.<figcaption>""</figcaption>.<p><strong>ಮುಂಬೈ: </strong>ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು ಕೊರೊನಾ ವೈರಸ್ ವಿರುದ್ಧದ ಹೋರಾಟದ ಪರಿಹಾರ ನಿಧಿಗೆ ₹ 80 ಲಕ್ಷ ದೇಣಿಗೆ ನೀಡಿದ್ದಾರೆ.</p>.<p>ಅವರು ಈ ಹಣದಲ್ಲಿ ನಾಲ್ಕು ಖಾತೆಗಳಿಗೆ ಹಂಚಿದ್ದಾರೆ. ಪ್ರಧಾಮಂತ್ರಿಗಳ ನಿಧಿಗೆ ₹ 45 ಲಕ್ಷ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಿಧಿಗೆ ₹ 25 ಲಕ್ಷ, ಝೊಮ್ಯಾಟೊ ಫೀಡಿಂಗ್ ಇಂಡಿಯಾಗೆ ₹ 5 ಲಕ್ಷ ಮತ್ತು ಬೀದಿ ನಾಯಿಗಳ ನೆರವು ನಿಧಿಗೆ ₹ 5 ಲಕ್ಷ ನೀಡಿದ್ದಾರೆ.</p>.<p>‘ನಮ್ಮ ದೇಶವು ಮರಳಿ ತನ್ನ ಕಾಲ ಮೇಲೆ ನಿಲ್ಲಬೇಕು. ಅದನ್ನು ಸಮೃದ್ಧಗೊಳಿಸುವುದು ನಮ್ಮೆಲ್ಲರ ಹೊಣೆ. ಅದಕ್ಕಾಗಿ ಈ ಅಲ್ಪ ಕಾಣಿಕೆಯನ್ನು ನೀಡುತ್ತಿದ್ದೇನೆ’ ಎಂದು ಮೊತ್ತೆ ವಿವರಗಳನ್ನು ರೋಹಿತ್ ಟ್ವೀಟ್ ಮಾಡಿದ್ದಾರೆ.</p>.<p>ಈಗಾಗಲೇ ದೇಣಿಗೆ ನೀಡಿರುವ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸುರೇಶ್ ರೈಆನ, ಅಜಿಂಕ್ಯ ರಹಾನೆ ಅವರ ಸಾಲಿಗೆ ರೋಹಿತ್ ಕೂಡ ಸೇರ್ಪಡೆಯಾಗಿದ್ದಾರೆ.</p>.<p class="Subhead"><strong>ಮಿಥಾಲಿ,ಪೂನಂ, ದೀಪ್ತಿ ದೇಣಿಗೆ: </strong>ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಮತ್ತು ಬೌಲರ್ ಪೂನಂ ಯಾದವ್ ಅವರು ಕ್ರಮವಾಗಿ ₹ 10 ಲಕ್ಷ ಮತ್ತು ₹ 2 ಲಕ್ಷ ನೀಡಿದ್ದಾರೆ. ಆಲ್ರೌಂಡರ್ ದೀಪ್ತಿ ಶರ್ಮಾ ಅವರೂ ₹1.5 ಲಕ್ಷ ಕೊಡುವುದಾಗಿ ತಿಳಿಸಿದ್ದಾರೆ.</p>.<div style="text-align:center"><figcaption><strong>ಮಿಥಾಲಿ ರಾಜ್</strong></figcaption></div>.<p>ಮಿಥಾಲಿ ಅವರು ಪ್ರಧಾನಮಂತ್ರಿಗಳ ನಿಧಿಗೆ ₹ 5 ಲಕ್ಷ ಮತ್ತು ಅಷ್ಟೇ ಮೊತ್ತವನ್ನು ತೆಲಂಗಾಣ ಮುಖ್ಯಮಂತ್ರಿ ನಿಧಿಗೆ ಕೊಟ್ಟಿದ್ದಾರೆ. ಪೂನಂ ಕೂಡ ಪ್ರಧಾನಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿಗಳ ನಿಧಿಗೆ ನೀಡುವುದಾಗಿ ತಿಳಿಸಿದ್ದಾರೆ.</p>.<p class="Subhead"><strong>ಮೂರು ದಿನದ ವೇತನ ದಾನ:</strong> ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ದ ಉದ್ಯೋಗಿಗಳು ತಮ್ಮ ಮೂರು ದಿನದ ವೇತನವನ್ನು ಪಿ.ಎಂ. ಕೇರ್ಸ್ ನಿಧಿಗೆ ನೀಡಿದ್ದಾರೆ. ಒಟ್ಟು ₹76 ಲಕ್ಷ ಹಣ ಸಂಗ್ರಹಿಸಿ ಕೊಟ್ಟಿದ್ದಾರೆ.</p>.<p><strong>₹ 3 ಲಕ್ಷ ನೀಡಿದ ಚೋಪ್ರಾ: </strong>ಜಾವೆಲಿನ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಅವರು ಪರಿಹಾರ ನಿಧಿಗೆ ಮೂರು ಲಕ್ಷ ರೂಪಾಯಿ ನೀಡಿದ್ದಾರೆ.</p>.<p>ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಅವರು ಕೇಂದ್ರ ಸರ್ಕಾರ ಪಿ.ಎಂ. ಕೇರ್ಸ್ ನಿಧಿಗೆ ಎರಡು ಲಕ್ಷ ರೂ್ಪಾಯಿ ಮತ್ತು ಹರಿಯಾಣ ಮುಖ್ಯಮಂತ್ರಿಗಳ ನಿಧಿಗೆ ಒಂದು ಲಕ್ಷ ರೂಪಾಯಿ ನೀಡಿದ್ದಾರೆ.</p>.<p class="Subhead"><strong>ಡಬ್ಲ್ಯುಎಫ್ಐನಿಂದ ₹ 11ಲಕ್ಷ:</strong> ಭಾರತ ಕುಸ್ತಿ ಸಂಸ್ಥೆಯು ₹ 11 ಲಕ್ಷ ದೇಣಿಗೆ ನೀಡಲಿದೆ ಎಂದು ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.</p>.<p class="Subhead"><strong>ಟಿಟಿಎಫ್ಐನಿಂದ ₹ 5ಲಕ್ಷ:</strong> ಭಾರತ ಟೇಬಲ್ ಟೆನಿಸ್ ಫೆಡರೇಷನ್ ಮಂಗಳವಾರ ಐದು ಲಕ್ಷ ರೂಪಾಯಿಯನ್ನು ಪ್ರಧಾನಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.</p>.<p>‘ನಮ್ಮ ಸಂಸ್ಥೆಗೆ ಸಾಮಾಜಿಕ ಹೊಣೆ ಇದೆ. ಈ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರದ ಕೈಬಲಪಡಿಸುವುದು ನಮ್ಮ ಕರ್ತವ್ಯ. ಭಾರತ ಒಲಿಂಪಿಕ್ಸಂಸ್ಥೆ (ಐಒಸಿ)ಗೆ ಚೆಕ್ ಕಳಿಸಿಕೊಟ್ಟಿದ್ದೇವೆ. ಎಲ್ಲ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಗೆ ಐಒಸಿಯು ದೇಣಿಗೆ ನೀಡುವಂತೆ ಮನವಿ ಮಾಡಿತ್ತು’ ಟಿಟಿಎಫ್ಐ ಪ್ರಕಟಣೆಯಲ್ಲಿ ತಿಳಿಸಿದೆ.</p>.<div style="text-align:center"><figcaption><strong>ಅನಿಲ್ ಕುಂಬ್ಳೆ</strong></figcaption></div>.<p><strong>ಅನಿಲ್ ಕುಂಬ್ಳೆ ನೆರವಿನ ಹಸ್ತ</strong><br /><strong>ಬೆಂಗಳೂರು:</strong> ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಕೊವಿಡ್ –19 ವಿರುದ್ಧದ ಹೋರಾಟಕ್ಕೆ ನೆರವಿನ ಹಸ್ತ ಚಾಚಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ. ಆದರೆ ನೀಡಲಿರುವ ಮೊತ್ತವನ್ನು ಬಹಿರಂಗಪಡಿಸಿಲ್ಲ.</p>.<p>‘ಎಲ್ಲರೂ ಸೇರಿ ದಿಟ್ಟ ಹೋರಾಟ ಮಾಡಿ ಕೊರೊನಾವನ್ನು ಬೌಲ್ಔಟ್ ಮಾಡೋಣ. ನನ್ನ ಅಲ್ಪಕಾಣಿಕೆಯನ್ನು ನೆರವಿನ ನಿಧಿಗೆ ಕೊಡುತ್ತಿದ್ದೇನೆ’ ಎಂದು ಕುಂಬ್ಳೆ ಟ್ವೀಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<figcaption>""</figcaption>.<p><strong>ಮುಂಬೈ: </strong>ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು ಕೊರೊನಾ ವೈರಸ್ ವಿರುದ್ಧದ ಹೋರಾಟದ ಪರಿಹಾರ ನಿಧಿಗೆ ₹ 80 ಲಕ್ಷ ದೇಣಿಗೆ ನೀಡಿದ್ದಾರೆ.</p>.<p>ಅವರು ಈ ಹಣದಲ್ಲಿ ನಾಲ್ಕು ಖಾತೆಗಳಿಗೆ ಹಂಚಿದ್ದಾರೆ. ಪ್ರಧಾಮಂತ್ರಿಗಳ ನಿಧಿಗೆ ₹ 45 ಲಕ್ಷ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಿಧಿಗೆ ₹ 25 ಲಕ್ಷ, ಝೊಮ್ಯಾಟೊ ಫೀಡಿಂಗ್ ಇಂಡಿಯಾಗೆ ₹ 5 ಲಕ್ಷ ಮತ್ತು ಬೀದಿ ನಾಯಿಗಳ ನೆರವು ನಿಧಿಗೆ ₹ 5 ಲಕ್ಷ ನೀಡಿದ್ದಾರೆ.</p>.<p>‘ನಮ್ಮ ದೇಶವು ಮರಳಿ ತನ್ನ ಕಾಲ ಮೇಲೆ ನಿಲ್ಲಬೇಕು. ಅದನ್ನು ಸಮೃದ್ಧಗೊಳಿಸುವುದು ನಮ್ಮೆಲ್ಲರ ಹೊಣೆ. ಅದಕ್ಕಾಗಿ ಈ ಅಲ್ಪ ಕಾಣಿಕೆಯನ್ನು ನೀಡುತ್ತಿದ್ದೇನೆ’ ಎಂದು ಮೊತ್ತೆ ವಿವರಗಳನ್ನು ರೋಹಿತ್ ಟ್ವೀಟ್ ಮಾಡಿದ್ದಾರೆ.</p>.<p>ಈಗಾಗಲೇ ದೇಣಿಗೆ ನೀಡಿರುವ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸುರೇಶ್ ರೈಆನ, ಅಜಿಂಕ್ಯ ರಹಾನೆ ಅವರ ಸಾಲಿಗೆ ರೋಹಿತ್ ಕೂಡ ಸೇರ್ಪಡೆಯಾಗಿದ್ದಾರೆ.</p>.<p class="Subhead"><strong>ಮಿಥಾಲಿ,ಪೂನಂ, ದೀಪ್ತಿ ದೇಣಿಗೆ: </strong>ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಮತ್ತು ಬೌಲರ್ ಪೂನಂ ಯಾದವ್ ಅವರು ಕ್ರಮವಾಗಿ ₹ 10 ಲಕ್ಷ ಮತ್ತು ₹ 2 ಲಕ್ಷ ನೀಡಿದ್ದಾರೆ. ಆಲ್ರೌಂಡರ್ ದೀಪ್ತಿ ಶರ್ಮಾ ಅವರೂ ₹1.5 ಲಕ್ಷ ಕೊಡುವುದಾಗಿ ತಿಳಿಸಿದ್ದಾರೆ.</p>.<div style="text-align:center"><figcaption><strong>ಮಿಥಾಲಿ ರಾಜ್</strong></figcaption></div>.<p>ಮಿಥಾಲಿ ಅವರು ಪ್ರಧಾನಮಂತ್ರಿಗಳ ನಿಧಿಗೆ ₹ 5 ಲಕ್ಷ ಮತ್ತು ಅಷ್ಟೇ ಮೊತ್ತವನ್ನು ತೆಲಂಗಾಣ ಮುಖ್ಯಮಂತ್ರಿ ನಿಧಿಗೆ ಕೊಟ್ಟಿದ್ದಾರೆ. ಪೂನಂ ಕೂಡ ಪ್ರಧಾನಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿಗಳ ನಿಧಿಗೆ ನೀಡುವುದಾಗಿ ತಿಳಿಸಿದ್ದಾರೆ.</p>.<p class="Subhead"><strong>ಮೂರು ದಿನದ ವೇತನ ದಾನ:</strong> ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ದ ಉದ್ಯೋಗಿಗಳು ತಮ್ಮ ಮೂರು ದಿನದ ವೇತನವನ್ನು ಪಿ.ಎಂ. ಕೇರ್ಸ್ ನಿಧಿಗೆ ನೀಡಿದ್ದಾರೆ. ಒಟ್ಟು ₹76 ಲಕ್ಷ ಹಣ ಸಂಗ್ರಹಿಸಿ ಕೊಟ್ಟಿದ್ದಾರೆ.</p>.<p><strong>₹ 3 ಲಕ್ಷ ನೀಡಿದ ಚೋಪ್ರಾ: </strong>ಜಾವೆಲಿನ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಅವರು ಪರಿಹಾರ ನಿಧಿಗೆ ಮೂರು ಲಕ್ಷ ರೂಪಾಯಿ ನೀಡಿದ್ದಾರೆ.</p>.<p>ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಅವರು ಕೇಂದ್ರ ಸರ್ಕಾರ ಪಿ.ಎಂ. ಕೇರ್ಸ್ ನಿಧಿಗೆ ಎರಡು ಲಕ್ಷ ರೂ್ಪಾಯಿ ಮತ್ತು ಹರಿಯಾಣ ಮುಖ್ಯಮಂತ್ರಿಗಳ ನಿಧಿಗೆ ಒಂದು ಲಕ್ಷ ರೂಪಾಯಿ ನೀಡಿದ್ದಾರೆ.</p>.<p class="Subhead"><strong>ಡಬ್ಲ್ಯುಎಫ್ಐನಿಂದ ₹ 11ಲಕ್ಷ:</strong> ಭಾರತ ಕುಸ್ತಿ ಸಂಸ್ಥೆಯು ₹ 11 ಲಕ್ಷ ದೇಣಿಗೆ ನೀಡಲಿದೆ ಎಂದು ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.</p>.<p class="Subhead"><strong>ಟಿಟಿಎಫ್ಐನಿಂದ ₹ 5ಲಕ್ಷ:</strong> ಭಾರತ ಟೇಬಲ್ ಟೆನಿಸ್ ಫೆಡರೇಷನ್ ಮಂಗಳವಾರ ಐದು ಲಕ್ಷ ರೂಪಾಯಿಯನ್ನು ಪ್ರಧಾನಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.</p>.<p>‘ನಮ್ಮ ಸಂಸ್ಥೆಗೆ ಸಾಮಾಜಿಕ ಹೊಣೆ ಇದೆ. ಈ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರದ ಕೈಬಲಪಡಿಸುವುದು ನಮ್ಮ ಕರ್ತವ್ಯ. ಭಾರತ ಒಲಿಂಪಿಕ್ಸಂಸ್ಥೆ (ಐಒಸಿ)ಗೆ ಚೆಕ್ ಕಳಿಸಿಕೊಟ್ಟಿದ್ದೇವೆ. ಎಲ್ಲ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಗೆ ಐಒಸಿಯು ದೇಣಿಗೆ ನೀಡುವಂತೆ ಮನವಿ ಮಾಡಿತ್ತು’ ಟಿಟಿಎಫ್ಐ ಪ್ರಕಟಣೆಯಲ್ಲಿ ತಿಳಿಸಿದೆ.</p>.<div style="text-align:center"><figcaption><strong>ಅನಿಲ್ ಕುಂಬ್ಳೆ</strong></figcaption></div>.<p><strong>ಅನಿಲ್ ಕುಂಬ್ಳೆ ನೆರವಿನ ಹಸ್ತ</strong><br /><strong>ಬೆಂಗಳೂರು:</strong> ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಕೊವಿಡ್ –19 ವಿರುದ್ಧದ ಹೋರಾಟಕ್ಕೆ ನೆರವಿನ ಹಸ್ತ ಚಾಚಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವುದಾಗಿ ಅವರು ಪ್ರಕಟಿಸಿದ್ದಾರೆ. ಆದರೆ ನೀಡಲಿರುವ ಮೊತ್ತವನ್ನು ಬಹಿರಂಗಪಡಿಸಿಲ್ಲ.</p>.<p>‘ಎಲ್ಲರೂ ಸೇರಿ ದಿಟ್ಟ ಹೋರಾಟ ಮಾಡಿ ಕೊರೊನಾವನ್ನು ಬೌಲ್ಔಟ್ ಮಾಡೋಣ. ನನ್ನ ಅಲ್ಪಕಾಣಿಕೆಯನ್ನು ನೆರವಿನ ನಿಧಿಗೆ ಕೊಡುತ್ತಿದ್ದೇನೆ’ ಎಂದು ಕುಂಬ್ಳೆ ಟ್ವೀಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>