ಹುಬ್ಬಳ್ಳಿ: ಅನುಭವಿ ಬ್ಯಾಟ್ಸ್ಮನ್ಗಳಾದ ಅಮಿತ್ ವರ್ಮಾ (59, 46 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ರಾಜು ಭಟ್ಕಳ (48, 38 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಕಿಕೊಟ್ಟ ಗಟ್ಟಿ ಬುನಾದಿ ಮೇಲೆ ಉಳಿದ ಬ್ಯಾಟ್ಸ್ಮನ್ಗಳು ರನ್ ಸೌಧ ಕಟ್ಟಿದರು. ಇದರಿಂದ ಮೈಸೂರು ವಾರಿಯರ್ಸ್ ತಂಡ ಸುಲಭವಾಗಿ ಗೆಲುವು ಪಡೆಯಿತು.