ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಳೀಟ್‌ಗಳಿಗೆ ರಾಹುಲ್ ದ್ರಾವಿಡ್ ಸಲಹೆ

Last Updated 18 ಮೇ 2020, 4:51 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಸೋಂಕು ತಡೆಗೆ ಲಾಕ್‌ಡೌನ್ ವಿಧಿಸಲಾಗಿದೆ. ಎಲ್ಲವೂ ಮುಕ್ತವಾದ ನಂತರ ಕ್ರೀಡಾ ಚಟುವಟಿಕೆಗಳು ಆರಂಭವಾಗುತ್ತವೆ. ಆಗ ಅಥ್ಲೀಟ್‌ಗಳನ್ನು ಸಂಶಯ, ಹಿಂಜರಿಕೆ ಮತ್ತು ಭಯ ಕಾಡಬಹುದು. ಆದರೆ ಇದು ದೊಡ್ಡ ಸಮಸ್ಯೆಯಲ್ಲ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಅವರು ಒಲಿಂಪಿಯನ್ ಶೂಟಿಂಗ್ ಪಟು ಅಭಿನವ್ ಬಿಂದ್ರಾ ಮತ್ತು ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ ಪಡುಕೋಣೆ ಅವರೊಂದಿಗೆ ನಡೆದ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದರು.

’ಕ್ರೀಡಾಪಟುಗಳು ಈ ಸಮಸ್ಯೆಯನ್ನು ಹಿಂದಿಕ್ಕಿ ಲಯಕ್ಕೆ ಬರಲು ಸಮಯಾವಕಾಶ ನೀಡಬೇಕು. ಎಲ್ಲರೂ ಆತ್ಮವಿಶ್ವಾಸದಿಂದಿರಬೇಕು. ದೃತಿಗೆಡದೇ ಕಾರ್ಯನಿರ್ವಹಿಸಿದರೆ ಈ ಸಮಸ್ಯೆ ದೊಡ್ಡದಾಗುವುದಿಲ್ಲ‘ ಎಂದು ದ್ರಾವಿಡ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT